Advertisement

ಪದ್ಮಶ್ರೀ ವಾಪಸ್‌

12:30 AM Feb 04, 2019 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮಣಿಪುರಿ ಸಿನಿಮಾ ನಿರ್ದೇಶಕ ಅರಿಬಮ್‌ ಶ್ಯಾಮ್‌ ಶರ್ಮ ತಮಗೆ 2006ರಲ್ಲಿ ನೀಡಲಾಗಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

Advertisement

ಪೌರತ್ವ ಮಸೂದೆ-2016 ಅನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರಿಗೆ ಬೆಂಬಲ ಸೂಚಿಸಿ ತಾವು ಈ ಪ್ರಶಸ್ತಿ ಹಿಂದಿರುಗಿಸಿದ್ದಾಗಿ ಅವರು ಹೇಳಿದ್ದಾರೆ. ಪೌರತ್ವ ವಿಧೇಯಕವು ಈಶಾನ್ಯ ರಾಜ್ಯಗಳ ವಿರೋಧಿ ವಿಧೇಯಕವಾಗಿದೆ. ಅದನ್ನು ಅಂಗೀಕರಿಸಬಾರದು ಎಂಬ ಈಶಾನ್ಯದ ಜನತೆಯ ಮನವಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next