Advertisement

ಸಮಯ ಪಾಲನೆ ವಿಚಾರದಲ್ಲಿ ಗಲಾಟೆ; ಬಸ್‌ ಚಾಲಕ, ನಿರ್ವಾಹಕರು ವಶಕ್ಕೆ

12:44 AM Feb 26, 2023 | Team Udayavani |

ಮಂಗಳೂರು: ಸಮಯ ಪಾಲನೆ ವಿಚಾರದಲ್ಲಿ ಬೈದಾಡಿಕೊಂಡು ತಳ್ಳಾಟ ನಡೆಸುತ್ತಿದ್ದ ಎರಡು ಸಿಟಿ ಬಸ್‌ಗಳ ಚಾಲಕರು ಮತ್ತು ನಿರ್ವಾ ಹಕರನ್ನು ಉರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಶನಿವಾರ ಬೆಳಗ್ಗೆ 6.50ಕ್ಕೆ ಅಶೋಕನಗರ ಶೇಡಿಗುರಿ ಬಸ್‌ ನಿಲ್ದಾಣ ಎದುರು ಎರಡು ಬಸ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಚಾಲಕರಾದ ಸಾಗರ್‌, ವಿಘ್ನೇಶ್‌, ನಿರ್ವಾಹಕರಾದ ಸುಧೀರ್‌, ಶ್ರೀಧರ್‌ ಪರಸ್ಪರ ಬೈದಾಡಿ ತಳ್ಳಾಟ ನಡೆಸಿ ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡು ತ್ತಿದ್ದರು. ಈ ಹಿನ್ನೆಲೆಯಲ್ಲಿ ಬಸ್‌ ಮತ್ತು ಸಿಬಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next