Advertisement

Teacher ದಂಪತಿ ಮಧ್ಯೆ ಗಲಾಟೆ: ಸರಳಿನಿಂದ ಹೊಡೆದ ಪತಿ; ಪತ್ನಿಯ ಸ್ಥಿತಿ ಗಂಭೀರ

02:22 AM Aug 18, 2024 | Team Udayavani |

ಪಾಂಡವಪುರ: ಪತಿಯು ಅನ್ಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂಬ ವಿಷಯಕ್ಕೆ ಶಿಕ್ಷಕ ದಂಪತಿ ನಡುವೆ ಜಗಳ ನಡೆದು, ಪತಿಯು ಪತ್ನಿಯ ತಲೆಗೆ ಕಬ್ಬಿಣದ ಸರಳಿನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

Advertisement

ಶಾಂತಿನಗರದ ನಿವಾಸಿ, ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿರುವ ನಟರಾಜು ಆರೋಪಿ. ಆತನ ಪತ್ನಿ ಪಟ್ಟಣದ ನೀಲಗೀರಿಸ್‌ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಅನಿತಾ (36) ಗಾಯಗೊಂಡವರು.

ಆರೋಪಿ ನಟರಾಜು (47)ವನ್ನು ಪೊಲೀಸರು ಬಂಧಿಸಿದ್ದಾರೆ. ಪತಿಗೆ ಅನೈತಿಕ ಸಂಬಂಧವಿದೆ ಎಂಬ ಶಂಕೆಯಿಂದ ಪತ್ನಿ ಆಗಾಗ ತಕರಾರು ತೆಗೆಯುತ್ತಿದ್ದರು. ಅದೇ ವಿಷಯವಾಗಿ ಗುರುವಾರ ರಾತ್ರಿ ಗಲಾಟೆ ನಡೆದಿದೆ. ಪತ್ನಿ ಶುಕ್ರವಾರ ಬೆಳಗ್ಗೆ ವರಮಹಾಲಕ್ಷ್ಮೀ ಪೂಜೆ ಮಾಡುತ್ತಿದ್ದಾಗ ನಟರಾಜು ಪತ್ನಿ ಅನಿತಾ ಅವರ ತಲೆಯ ಭಾಗಕ್ಕೆ ಕಬ್ಬಿಣದ ಸರಳಿನಿಂದ ಬಲವಾಗಿ ನಾಲ್ಕೈದು ಬಾರಿ ಹೊಡೆದನು. ಗಲಾಟೆ ಕೇಳಿ ನೆರೆಹೊರೆಯವರು ಆಗಮಿಸಿದ್ದು, ತೀವ್ರ ರಕ್ತಸ್ರಾವವಾಗಿ ಕುಸಿದುಬಿದ್ದಿದ್ದ ಅನಿತಾರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next