Advertisement

ಚುನಾವಣೆಗೆ ಅಖಾಡ ಸಿದ್ಧ; ರಾಜ್ಯದಲ್ಲೂ 3 ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ

11:30 PM Dec 09, 2022 | Team Udayavani |

ಬೆಂಗಳೂರು: ಗುಜರಾತ್‌, ಹಿಮಾಚಲ ಪ್ರದೇಶ ಚುನಾವಣೆಯ ಫ‌ಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಿದ್ಧತೆಗೂ ಚಾಲನೆ ದೊರಕಿದ್ದು, ಮೂರೂ ಪಕ್ಷ ಗಳು ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ತಮ್ಮದೇ ಕಾರ್ಯತಂತ್ರ ಆರಂಭಿಸಿವೆ.

Advertisement

ಎರಡೂ ರಾಜ್ಯದ ಫ‌ಲಿತಾಂಶದ ಜತೆಗೆ ದಿಲ್ಲಿ ಮಹಾನಗರ ಪಾಲಿಕೆ ಫ‌ಲಿತಾಂಶದ ಆಧಾರದಲ್ಲಿ ರಾಜ್ಯದ ಮತದಾರರ ಮನವೊಲಿಸಿಕೊಳ್ಳಲು ಅನುಸರಿಸಬೇಕಾದ ತಂತ್ರಗಳ ಬಗ್ಗೆ ಸಮಾಲೋಚನೆ ಪ್ರಾರಂಭವಾಗಿದೆ.

ಮುಂದಿನ ಮೂರು ತಿಂಗಳ ಕಾಲ ಸಮುದಾಯವಾರು ಸಮಾವೇಶ, ಯಾತ್ರೆ, ವಾರ್‌ ರೂಂ ಸ್ಥಾಪನೆ, ಟಿಕೆಟ್‌ ಕುರಿತು ಜಿಲ್ಲಾ, ವಿಭಾಗವಾರು ಸಭೆ ಕುರಿತು ನೀಲನಕ್ಷೆಯೊಂದಿಗೆ ಕ್ಷೇತ್ರಕ್ಕಿಳಿಯಲು ತಯಾರಿ ನಡೆದಿದೆ.

ಆಡಳಿತಾರೂಢ ಬಿಜೆಪಿಯಲ್ಲಿ ಗುಜರಾತ್‌ ಮಾದರಿ ಜಪ ನಡೆಯು ತ್ತಿದ್ದು, ಇಲ್ಲಿಯೂ ಅದೇ ಮಾದರಿ ಅನುಸರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕಾಂಗ್ರೆಸ್‌ನಲ್ಲೂ ಗುಜರಾತ್‌ ಮಾದರಿಯ ಬಗ್ಗೆ ಚರ್ಚೆಯಾಗು ತ್ತಿದೆ. ಬಿಜೆಪಿಯು ಗುಜರಾತ್‌ನಲ್ಲಿ ಅನುಸರಿಸಿದಂತೆ ಕಾಂಗ್ರೆಸ್‌ ರಾಜ್ಯ ದಲ್ಲಿಯೂ ಶೇ. 60 ಕಿರಿಯರು, ಶೇ. 40 ಹಿರಿಯರಿಗೆ ಟಿಕೆಟ್‌ ನೀಡಬೇಕು. ನಮ್ಮಲ್ಲಿ ಸೋಲುತ್ತಾರೆ ಎಂದು ಗೊತ್ತಿದ್ದರೂ ಹಿರಿತನ ಎಂದು ಟಿಕೆಟ್‌ ನೀಡಲಾಗುತ್ತಿದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ನೀಡಿರುವ ಹೇಳಿಕೆ ಪಕ್ಷದ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

Advertisement

ಡಿಕೆಶಿ “ದಲಿತ ಸಿಎಂ’ ಬಾಂಬ್‌
ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಯಾಕಾಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬಾಂಬ್‌ ಸಿಡಿಸಿದ್ದು, ಕಾಂಗ್ರೆಸ್‌ನಲ್ಲಿ ಮಾತ್ರ ಆ ಅವಕಾಶ ಇದೆ ಎಂದೂ ಹೇಳಿದ್ದಾರೆ.

“ಕಾಂಗ್ರೆಸ್‌ನಲ್ಲಿ ದಲಿತರು ಮುಖ್ಯಮಂತ್ರಿ ಆಗುವ ಅವಕಾಶವಿದೆ. ಅವರಿಗೆ ಅರ್ಹತೆ ಹಾಗೂ ಹಿರಿತನ ಎರಡೂ ಇದೆ. ಅವರು ಪಕ್ಷಕ್ಕಾಗಿ ಶ್ರಮಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ರಂಗನಾಥ್‌ ಅವರಿಂದ ಹಿಡಿದು ಮಲ್ಲಿ ಕಾರ್ಜುನ ಖರ್ಗೆ, ಪರಮೇಶ್ವರ್‌ ಇತ್ಯಾದಿಯಾಗಿ ನಮ್ಮ ಪಕ್ಷವನ್ನು ಕಷ್ಟದ ಸಮಯದಲ್ಲಿ ಮುನ್ನಡೆಸಿಕೊಂಡು ಬಂದಿದ್ದಾರೆ. ಇದು ಕಾಂಗ್ರೆಸ್‌ ಇತಿಹಾಸ. ಬೇರೆ ಪಕ್ಷಗಳಲ್ಲಿ ಇಂತಹ ಇತಿಹಾಸ
ಸೃಷ್ಟಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಜೆಡಿಎಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳು ಕೂಡ ಮುಂದಿನ ವಿಧಾನಸಭೆ ಚುನಾವಣೆಗೆ ತಮ್ಮದೇ ಆದ ರೀತಿಯಲ್ಲಿ ಸಜ್ಜಾಗುತ್ತಿವೆ.

ಧರ್ಮೇಂದ್ರ ಪ್ರಧಾನ್,ಪೀಯೂಶ್‌ ಗೋಯಲ್‌, ಭೂಪೇಂದ್ರ ಯಾದವ್‌ ಅವರಿಗೆ ಕರ್ನಾಟಕ ರಾಜ್ಯದ ಚುನಾವಣೆ ಉಸ್ತುವಾರಿ ವಹಿಸಲು ನಿರ್ಧರಿಸಲಾಗಿದೆ. ಡಿ. 12ರ ವೇಳೆಗೆ ಈ ತಂಡ ರಾಜ್ಯದ ನಾಯಕರ ಜತೆ ಸಂಪರ್ಕ ಸಾಧಿಸಲಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಸಂಪರ್ಕ ಯಾತ್ರೆ ಮುಂದುವರಿಸಿ ಮುಂದಿನ ವಾರದೊಳಗೆ ಬೆಂಗಳೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಯಾತ್ರೆ ಕೈಗೊಳ್ಳಲಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳಿಗೆ ಮತದಾರರ ಪಟ್ಟಿ ಪರಿಷ್ಕರಣೆಯ ಟಾಸ್ಕ್ ನೀಡಿದ್ದು, ಬಳಿಕ ಜಿಲ್ಲಾವಾರು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಜ. 3ರಂದು ಉತ್ತರ ಕರ್ನಾಟಕ ಭಾಗ ದಲ್ಲಿ ಸಿದ್ದರಾಮಯ್ಯ ಬಸ್‌ ಯಾತ್ರೆ ಆರಂಭವಾಗಲಿದೆ. ಡಿ.ಕೆ. ಶಿವಕುಮಾರ್‌ ದಕ್ಷಿಣ ಕರ್ನಾಟಕ ಭಾಗದಲ್ಲಿ ಯಾತ್ರೆ ಆರಂಭಿಸುವ ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ಎಐಸಿಸಿ ಅಧ್ಯಕ್ಷ ಖರ್ಗೆ, ಸೋನಿಯಾ, ರಾಹುಲ್‌, ರಾಜ್ಯ ಉಸ್ತುವಾರಿ ಸುಜೇì ವಾಲಾ ಸಮ್ಮುಖದಲ್ಲಿ ರಾಜ್ಯ ನಾಯಕರ ಸಭೆ ಶೀಘ್ರದಲ್ಲೇ ನಡೆಯಲಿದೆ.

ಎಚ್‌.ಡಿ. ಕುಮಾರಸ್ವಾಮಿ ಡಿ. 11ರಿಂದ ಚಿಕ್ಕನಾಯಕನಹಳ್ಳಿಯಿಂದ ಎರಡನೇ ಹಂತದ ಪಂಚರತ್ನ ಯಾತ್ರೆ ಕೈಗೊಳ್ಳಲಿದ್ದು, ಆಯಾ ಕ್ಷೇತ್ರಕ್ಕೆ ಹೋದಾಗ ಆಕಾಂಕ್ಷಿಗಳು ಹಾಗೂ ಪ್ರಮುಖರ ಜತೆ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಮತ್ತೂಂದೆಡೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪಕ್ಷದ ಸಂಸದೀಯ ಮಂಡಳಿ ಹಾಗೂ ಕೋರ್‌ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ
ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next