ವೇಣೂರು: ತಾಲೂಕಿನ ಎಳನೀರು, ಮಲವಂತಿಗೆಯಲ್ಲಿ ಕಾಣಿಸಿಕೊಂಡಿದ್ದ ಅಡಿಕೆ ಎಲೆಚುಕ್ಕಿ ರೋಗ ಇದೀಗ ಗುಂಡೂರಿ ಗ್ರಾಮದ ತೋಟದಲ್ಲೂ ಕಾಣಿಸಿಕೊಂಡಿದೆ.
ಹವಮಾನ ವೈಪರಿತ್ಯದಿಂದ ಕೊಲೆ ಟ್ರೋಟ್ರಿಕಮ್ ಗ್ಲೋಯೋಸ್ಟೋರಿ ಯೆಯಿಡ್ಸ್ ಎಂಬ ಶಿಲೀಂಧ್ರದಿಂದ ಉಂಟಾದ ಈ ರೋಗ ವಾರಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಎಳ ನೀರು, ಮಲವಂತಿಗೆ ತೋಟಗಳಲ್ಲಿ ಕಾಣಿಸಿಕೊಂಡಿತ್ತು.
ಇದೀಗ ಗುಂಡೂರಿ ಗ್ರಾಮದ ಕಲ್ಕಡ, ಮಲೆಬೆಟ್ಟು ಪರಿಸರದ ತೋಟಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, 1000ಕ್ಕೂ ಮಿಕ್ಕಿ ಅಡಿಕೆ ಮರಗಳು ರೋಗಕ್ಕೆ ತುತ್ತಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.
ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿರುವ ರೈತರಿಗೆ ಹೆಕ್ಸ್ ಕೋನೊಜಲ್ ಅಥವಾ ಪ್ರೊಪಿ ಕೊಜಲ್ ದ್ರಾವಣವನ್ನು ಒಂದು ಲೀ. ನೀರಿಗೆ 1 ಎಂ.ಎಲ್.ನಷ್ಟು ಬೆರೆಸಿ ರೋಗಬಾಧಿತ ಮರಗಳಿಗೆ ಸಿಂಪಡಿಸುವಂತೆ ಸಲಹೆ ನೀಡಿದ್ದಾರೆ.
Related Articles