Advertisement

ಬಿಲ್ಗಾರರು ವಿಶ್ವಕಪ್‌ ತಪ್ಪಿಸಿಕೊಳ್ಳಲು ಕೇಂದ್ರ ಕ್ರೀಡಾ ಸಚಿವಾಲಯ ಕಾರಣ

11:58 AM Apr 23, 2019 | keerthan |

ಚಂಡೀಗಢ: ಕಳೆದ ಶನಿವಾರ ಕಡೆಯ ಕ್ಷಣದಲ್ಲಿ ಭಾರತೀಯ ಬಿಲ್ಗಾರರು ವಿಶ್ವಕಪ್‌ ಸ್ಪರ್ಧೆಯನ್ನು ತಪ್ಪಿಸಿಕೊಂಡಿದ್ದಕ್ಕೆ, ಕೇಂದ್ರ ಕ್ರೀಡಾ ಸಚಿವಾಲಯವೇ ಕಾರಣ ಎಂದು ಎಎಐ (ಭಾರತ ಬಿಲ್ಗಾರಿಕೆ ಸಂಸ್ಥೆ) ಕಾರ್ಯದರ್ಶಿ ಮಹಾಸಿಂಗ್‌ ಆರೋಪಿಸಿದ್ದಾರೆ.

Advertisement

ನಾವು 75 ದಿನಕ್ಕೂ ಮುನ್ನ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಕೇಂದ್ರ ಕ್ರೀಡಾ ಇಲಾಖೆ ಅದನ್ನು ಪುರಸ್ಕರಿಸಿದ್ದು ಕಳೆದ ಸೋಮವಾರ. ಕಡೆಗೆ ಗಡಿಬಿಡಿಯಲ್ಲಿ ಟಿಕೆಟ್‌ಗಳನ್ನು ಖರೀದಿ ಮಾಡಬೇಕಾದ ಪರಿಸ್ಥಿತಿ ಬಂತು. ಆದ್ದರಿಂದ ಕಡೆಯ ಹಂತದಲ್ಲಿ ಸೂಕ್ತ ಬದಲಾವಣೆ ಸಾಧ್ಯವಾಗಲಿಲ್ಲ ಎಂದು ಮಹಾ ಸಿಂಗ್‌ ವಿವರಿಸಿದ್ದಾರೆ.

ಬಂದ್‌ ಆಗಿತ್ತು ಪಾಕ್‌ ವಾಯು ಮಾರ್ಗ
ಶನಿವಾರ ಕೊಲಂಬಿಯಾದ ಮೆಡೆಲಿನ್‌ಗೆ ತೆರಳಲು ದೀಪಿಕಾ ಕುಮಾರಿ, ಬೊಂಬಯ್ಲ ದೇವಿ, ಅತನು ದಾಸ್‌ ಸೇರಿದಂತೆ 22 ಮಂದಿ ಯಿದ್ದ ಭಾರತೀಯ ಬಿಲ್ಗಾರರ ತಂಡ ಹೊರಟು ನಿಂತಿತ್ತು. ಈ ವೇಳೆ ಮಾಹಿತಿ ನೀಡಿದ ಕೆಎಲ್‌ಎಂ ಡಚ್‌ ವಿಮಾನಯಾನ ಸಂಸ್ಥೆ, ಪಾಕಿಸ್ಥಾನದ ವಾಯುಮಾರ್ಗ ಮುಚ್ಚಿರುವುದರಿಂದ ವಿಮಾನ ಬೊಗೊಟಕ್ಕೆ ತೆರಳುವುದು 2 ಗಂಟೆ ತಡವಾಗುತ್ತದೆ. ಅಷ್ಟರಲ್ಲಿ ಬೊಗೊಟದಿಂದ ಮೆಡೆಲಿನ್‌ಗೆ ತೆರಳಬೇಕಿರುವ ಸಂಪರ್ಕ ವಿಮಾನ ಹೊರಟು ಹೋಗಿರುತ್ತದೆ ಎಂದು ಭಾರತೀಯರಿಗೆ ತಿಳಿಸಿತ್ತು. ಇದನ್ನು ಕೂಡಲೇ ಎಎಐಗೆ ಬಿಲ್ಗಾರರೊಬ್ಬರು ಕರೆ ಮಾಡಿ ತಿಳಿಸಿದ್ದರು. ಆ ಹಂತದಲ್ಲಿ ಪರಿಸ್ಥಿತಿಯನ್ನು ಸರಿಪಡಿಸಲು ಎಲ್ಲ ಯತ್ನ ಮಾಡಿದರೂ, ಫ‌ಲಕಾರಿಯಾಗದೇ ಕೂಟಕ್ಕೆ ತೆರಳುವುದನ್ನೇ ರದ್ದು ಮಾಡಬೇಕಾಗಿ ಬಂದಿತ್ತು.

ಈ ಅವ್ಯವಸ್ಥೆಗೆ ಕೇಂದ್ರ ಕ್ರೀಡಾ ಕಾರ್ಯ ದರ್ಶಿಗಳೇ ಉತ್ತರ ನೀಡ ಬೇಕು. ಆದರೆ ಇದುವರೆಗೂ ಅವರು ನಮ್ಮ ಕರೆ ಸ್ವೀಕರಿಸುತ್ತಿಲ್ಲ.
ಮಹಾಸಿಂಗ್‌ , ಭಾರತ ಬಿಲ್ಗಾರಿಕೆ ಸಂಸ್ಥೆ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next