Advertisement

ಭಟ್ಕಳ: ಅರವಿಂದ ಸ್ವಾಮಿ ಅಭಿನಯಿಸುತ್ತಿರುವ ಮಲಯಾಳಂ ಸಿನಿಮಾ ಚಿತ್ರೀಕರಣ

03:16 PM Oct 29, 2021 | Team Udayavani |

ಭಟ್ಕಳ:  ಮಲಯಾಳಂ, ತಮಿಳು ಸೇರಿದಂತೆ ಬಹುಭಾಷಾ ತಾರೆ ಅರವಿಂದ ಸ್ವಾಮಿ ಅಭಿನಯದ ಅಭಿನಯನದ “ಒಟ್ಟು” ಮಲಯಾಳಂ ಚಿತ್ರದ ಚಿತ್ರೀಕರಣ ನಗರದ ಶಂಶುದ್ಧೀನ್ ಸರ್ಕಲ್, ಮುಖ್ಯ ರಸ್ತೆ, ಮೀನು ಮಾರುಕಟ್ಟೆಗಳಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಿತು.

Advertisement

ದೃಶ್ಯವೊಂದರಲ್ಲಿ ನಿಂತಿರುವ ಕಾರೊಂದರ ಹಿಂದುಗಡೆ ನಿಂತಿರುವ ಅರವಿಂದ ಸ್ವಾಮಿ ದೂರವಾಣಿಯಲ್ಲಿ ಮಾತನಾಡುತ್ತಾ ಭಟ್ಕಳ್, ಭಟ್ಕಳ್ ಎನ್ನುವ ದೃಶ್ಯವನ್ನು ಚಿತ್ರೀಕರಿಸಲಾಯಿತು.  ಇನ್ನೊಂದು ದೃಶ್ಯದಲ್ಲಿ ನಗರದ ಹಳೇ ಪುರಸಭಾ ಕಟ್ಟಡದ ಒಳಗಿರುವ ತರಕಾರಿ ಮಾರುಕಟ್ಟೆಯೊಳಕ್ಕೆ ಹೋಗಿ ಹೊರ ಬರುವ ದೃಶ್ಯವಿದೆ.

ಬಹುಭಾಷಾ ಹೀರೋ ಭಟ್ಕಳಕ್ಕೆ ಬಂದಿರುವ ಸುದ್ದಿ ತಿಳಿಯುತ್ತಲೇ ಸಿನೆಮಾ ಪ್ರಿಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಚಿತ್ರೀಕರಣದ ವೇಳೆ ಕ್ಯಾಮರಾಮೆನ್, ಸಹ ನಟರು, ಸಹಾಯಕರು ಸೇರಿದಂತೆ 50ಕ್ಕೂ ಹೆಚ್ಚು ಜನರು ಬಂದಿದ್ದು, ಚಿತ್ರೀಕರಣದ ಸ್ಥಳದಲ್ಲಿ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಯಿತು.

ಇದನ್ನೂ ಓದಿ: ಜೊತೆಗಿರದ ಜೀವ ಎಂದಿಗೂ ಜೀವಂತ…! ‘ಕೋಟ್ಯಾಧಿಪತಿ’ಯನ್ನು ಕಳೆದುಕೊಂಡ ಕರುನಾಡು

Advertisement

ಪ್ರಮುಖ ಮಲಯಾಳಿ ನಟ ಕುಂಚಾಕೋ ಬೋಬಾನ್, ನಟಿ ಈಶಾ ರೆಬ್ಬಾ ಕೂಡಾ ಹಾಜರಿದ್ದರು.  ಎಸ್. ಸಂಜೀವ ಅವರ ಕಥೆಯನ್ನಾಧರಿಸಿ ಆಗಸ್ಟ್ ಸಿನೆಮಾಸ್ ಮತ್ತು ಸಿನಿ ಹಾಲಿಕ್ಸ ನಿರ್ಮಾಣದಡಿಯಲ್ಲಿ ಚಿತ್ರ ಮೂಡಿಬರುತ್ತಿದ್ದು ಪಿಲ್ಲಿನಿ ಟಿ.ಪಿ. ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಆಹ್ ಖಾಸೀಫ್ ಸಂಗೀತ ನಿರ್ದೇಶಕರಾಗಿದ್ದು ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆ ಕೊರೊನಾದ ನಂತರ ಭಟ್ಕಳದ ಸುತ್ತಮುತ್ತ ಚಿತ್ರೀಕರಣಗೊಂಡ ಮೊದಲ ಚಿತ್ರ ಇದಾಗಿದ್ದು ಜನರಲ್ಲಿ ಹೆಚ್ಚು ಕುತೂಹಲ ಮೂಡಲು ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next