ಅರಂತೋಡು: ಸುಳ್ಯ ತಾಲೂಕಿನ ಅರಂತೋಡು ಬಿಳಿಯಾರು ಸೇತುವೆ ಬಳಿ ಕಿಡಿಗೇಡಿಗಳು ಸತ್ತ ಕುರಿಯೊಂದನ್ನು ಬಿಸಾಕಿದ ಘಟನೆ ನಡೆದಿದೆ.
ಸೇತುವೆಯ ಬಳಿ ದುರ್ನಾತ ಬೀರುವ ಕಟ್ಟುವೊಂದನ್ನು ಕಂಡ ಸ್ಥಳೀಯರು, ಪಂಚಾಯತ್ ಸದಸ್ಯ ಪುಷ್ಪಾಧರ ಎಂಬವರ ಗಮನಕ್ಕೆ ತಂದಿದ್ದರು. ಸುಳ್ಯ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಸತ್ತ ಕುರಿಯನ್ನು ಚೀಲದಲ್ಲಿ ತುಂಬಿಸಿ ಬಿಸಾಡಿದ ಘಟನೆ ಬೆಳಕಿಗೆ ಬಂದಿದೆ. ಬಳಿಕ ಅದನ್ನು ಗುಂಡಿಯಲ್ಲಿ ಮುಚ್ಚಲಾಯಿತು.
ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ವಾರದ ಐದು ದಿನವು ಎಸ್ಎಲ್ಆರ್ ಎಮ್ ತಂಡವು ಸ್ವಚ್ಛತೆಯನ್ನು ಮಾಡುತ್ತಾ ಬಂದಿದರೂ ಇತ್ತೀಚಿನ ದಿನಗಳಲ್ಲಿ ತರಕಾರಿ ಸಾಗಾಟಗಾರರು, ಕೋಳಿ ಸಾಗಾಟಗಾರರು ಜನವಸತಿಯಿಲ್ಲದ ಸ್ಠಳದಲ್ಲಿ ಕೊಳೆತ ವಸ್ತುವನ್ನು ಬಿಸಾಡುವುದು ನಿರಂತರವಾಗಿ ನಡೆಯುತ್ತಿದೆ.
ಇದನ್ನೂ ಓದಿ:ಸಂತೋಷ ಕೂಟಕ್ಕೆ ಹೊರಟವರು ಮಸಣ ಸೇರಿದರು! ಭೀಕರ ಅಪಘಾತದಲ್ಲಿ 9 ಮಂದಿ ಮಹಿಳೆಯರು ಸೇರಿ 11 ಸಾವು
ಈ ಸಂದರ್ಭದಲ್ಲಿ ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ, ಸುಳ್ಯ ತಾಲ್ಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಸೋಮಶೇಖರ್ ಪೈಕ, ವಿನೋದ್ ಉಳುವಾರು, ನವೀನ್, ವಾಹನ ಮಾಲಕ ಚಾಲಕ ಸದಸ್ಯರು ಸಹಕರಿಸಿದರು .