Advertisement

Aranthodu ಬಸ್‌ – ಬೈಕ್‌ ಅಪಘಾತ; ಗಂಭೀರ ಗಾಯಗೊಂಡಿದ್ದ ಶಿಕ್ಷಕ ಸಾವು

12:56 AM Mar 02, 2024 | Team Udayavani |

ಅರಂತೋಡು: ಅರಂಬೂರಿನ ಪಾಲಡ್ಕದಲ್ಲಿ ಶುಕ್ರವಾರ ಸಂಭವಿಸಿದ ಬಸ್‌ – ಬೈಕ್‌ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕ ಪದ್ಮನಾಭ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

Advertisement

ಶಿಕ್ಷಕ ಪದ್ಮನಾಭ ಅವರು ಚಲಾಯಿಸುತ್ತಿದ್ದ ಬೈಕ್‌ ಪಾಲಡ್ಕದಲ್ಲಿ ಶುಕ್ರವಾರ ಖಾಸಗಿ ಬಸ್‌ಗೆ ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಮೃತಪಟ್ಟರು.

ಗೂನಡ್ಕ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ಮೂಲತಃ ಅರಂತೋಡು ಗ್ರಾಮದ ಕಿರ್ಲಾಯ ಪೂಜಾರಿ ಮನೆಯವರಾಗಿದ್ದಾರೆ.ಸುಳ್ಯದಲ್ಲಿ ಅವರು ಕುಟುಂಬ ಸಮೇತ ವಾಸವಾಗಿದ್ದರು.

ಬೈಕ್‌ಗಳ ಢಿಕ್ಕಿ; ಮೂವರಿಗೆ ಗಾಯ
ಅರಂತೋಡು: ಓವರ್‌ಟೇಕ್‌ ಮಾಡುವ ಯತ್ನದಲ್ಲಿ ಬೈಕ್‌ಗಳ ಮಧ್ಯೆ ಪರಸ್ಪರ ಅಪಘಾತ ಸಂಭವಿಸಿ, ದಂಪತಿ ಸೇರಿದಂತೆ ಮೂವರು ಗಾಯ ಗೊಂಡ ಘಟನೆ ಸಂಪಾಜೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಬೈಕ್‌ಗಳೆರಡು ಮಡಿ ಕೇರಿ ಯಿಂದ ಸುಳ್ಯದ ಕಡೆಗೆ ಬರುತ್ತಿದ್ದು, ಓವರ್‌ಟೇಕ್‌ ಮಾಡುವ ಯತ್ನ ದಲ್ಲಿ ಬೈಕ್‌ – ಬೈಕ್‌ ಢಿಕ್ಕಿ ಹೊಡೆದು ಕೊಂಡಿದ್ದು, ಒಂದು ಬೈಕಿನಲ್ಲಿದ್ದ ದಂಪತಿ ಸಹಿತ ಮೂವರು ಗಾಯ ಗೊಂಡಿರುವು ದಾಗಿ ತಿಳಿದುಬಂದಿದೆ. ಮಿಥುನ್‌ ಬಂಟೋಡಿ ಎಂಬ ಯುವಕನ ಕಾಲು ಮುರಿತ ಕ್ಕೊಳಗಾಗಿದೆ. ಅವರ ಪುತ್ರಿಗೂ ಗಾಯವಾಗಿದೆ.

ಚೆಂಬು: ವಿಷ ಸೇವಿಸಿ
ಆತ್ಮಹತ್ಯೆಗೆ ಯತ್ನ
ಅರಂತೋಡು: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೆಂಬು ಗ್ರಾಮದ ಪನೇಡ್ಕದಲ್ಲಿ ಗುರುವಾರ ವರದಿಯಾಗಿದೆ. ಮಹಿಳೆಯನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಚೆಂಬು ಗ್ರಾಮದ ಪನೇಡ್ಕ ತಾರಕುಮಾರ ಅವರ ಪತ್ನಿ ಅವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next