Advertisement

ಬದಲಾವಣೆ ಎಂಬುದು ಅಸಂಗತದ ಮಾತುಗಳು : ಆರಗ ಜ್ಞಾನೇಂದ್ರ

01:51 PM Jun 06, 2021 | Team Udayavani |

ಶಿವಮೊಗ್ಗ :  ಈಗ ಯಾವುದನ್ನು ಚರ್ಚೆಯ ಮಾಡುವ ಸಮಯವಲ್ಲ.‌ ಇದು ಕೋವಿಡ್  ವಿರುದ್ಧ ಹೋರಾಟದ ಸಮಯ‌. ಈಗ ಬದಲಾವಣೆ ಎಂಬುದು ಅಸಂಗತದ ಮಾತುಗಳು. ಬದಲಾವಣೆ ಸಾಧ್ಯವಿಲ್ಲ.. ಯಡಿಯೂರಪ್ಪ ನಮ್ಮ ಏಕಮಾತ್ರ ನಾಯಕರು ಎಂದು ಶಿವಮೊಗ್ಗದಲ್ಲಿ ತೀರ್ಥಹಳ್ಳಿ ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಹೈಕಮಾಂಡ್ ಹೇಳಿದರೇ ರಾಜೀನಾಮೆ ನೀಡುವೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಮುಂದುವರಿಯುತ್ತಾರೆ. ಅವರ ಬದಲಾವಣೆ ಇರಾದೇ ನಮ್ಮಂತ ಶಾಸಕರ ಕಡೆಯಿಂದ ಇಲ್ಲ. ಯಡಿಯೂರಪ್ಪ ಬಗ್ಗೆ ನಮ್ಮ ವಿಶ್ವಾಸವಿದೆ. ಅವರೇ ಮುಂದುವರಿದು, ಕೋವಿಡ್ ವಿರುದ್ದ ಕೆಲಸ ಮಾಡುತ್ತಿದ್ದಾರೆ. ಏನು ಕಿರಿಕಿರಿ ಇಲ್ಲ. ಕೆಲಸ ಇಲ್ಲದವರೂ ಏನು ಬೇಕಾದರೂ ಮಾತನಾಡಬಹುದು. ನಾವೆಲ್ಲಾ ಬ್ಯುಸಿ ಇದ್ದೇವೆ. ನಾಯಕತ್ವದ ಕೊರತೆಯಿಲ್ಲ. ಜನರ ನಡುವೆ ಕೆಲಸ ಮಾಡುತ್ತಿದ್ದೇವೆ ಎಂದರು.

ಕೋವಿಡ್ ಜೀರೋ ಆಗ್ಬೇಕು… ಕೋವಿಡ್ ಮುಕ್ತ ಕರ್ನಾಟಕ ಆಗಬೇಕು. ಯಡಿಯೂರಪ್ಪರನ್ನು ಬದಲಾಯಿಸಿದ್ರೇ ಕೋವಿಡ್ ಹೋಗುತ್ತಾ..? ಯಾರು ಹೇಳಿದ್ದು ಅದ್ನಾ…? ಯಾತಕ್ಕೆ ದೆಹಲಿಗೆ ಹೋಗ್ತಾರೋ ಗೊತ್ತಿಲ್ಲ.. ಹೋದವರಲ್ಲಾ ಇದಕ್ಕೆ ಹೋಗಲ್ಲ.. ಏಕೆ ದೆಹಲಿಗೆ ಹೋದರೂ.. ಇಂತವರು ಬಂದಿದ್ರೂ ಎಂದು ಹೈಕಮಾಂಡ್ ಹೇಳಬೇಕು.

ಹೈಕಮಾಂಡ್ ಈಗಾಗಲೇ ಸ್ಪಷ್ಟ ಪಡಿಸಿದ್ದು, ಸಿಎಂ‌ ಬದಲಾವಣೆ ಮಾಡಲ್ಲ ಎಂದಿದ್ದಾರೆ. ಯಡಿಯೂರಪ್ಪ ಐದು ವರ್ಷ ಪೂರ್ಣ ಮಾಡ್ತಾರೆ. ಅತ್ಯಂತ ದಕ್ಷತೆಯಿಂದ ಕೆಲಸ ಮಾಡ್ತಾ ಇದ್ದಾರೆ. ನಾವು, ರಾಜ್ಯ ನಾಯಕರು ಸೇರಿ ದಂತೆ ಹೈಕಮಾಂಡ್ ಕೂಡ ಬಿಎಸ್ ಬೈ ಅವರ ಜೊತೆಗಿದ್ದಾರೆ ಎಂದ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next