Advertisement

ಅನಿವಾರ್ಯ ಇದ್ದವರಿಗೆ ಅಂತರ್‌ ಜಿಲ್ಲಾ ವರ್ಗಾವಣೆಗೆ ಚಿಂತನೆ: ಆರಗ ಜ್ಞಾನೇಂದ್ರ 

07:48 PM Oct 23, 2022 | Team Udayavani |

ಶಿರಸಿ: ಅನಿವಾರ್ಯ ಇದ್ದವರಿಗೆ ಅಂತರ್‌ ಜಿಲ್ಲಾ ಪೊಲೀಸ್‌ ವರ್ಗಾವಣೆ ಅವಕಾಶ ಕೊಡುವಂತೆ ಒತ್ತಡವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪೊಲೀಸ್‌ ಇಲಾಖೆಯಲ್ಲಿ ಬೆಳಗಾವಿ, ಕಲಬುರಗಿ, ರಾಯಚೂರು ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವರು ಅನಿವಾರ್ಯಕ್ಕೆ ಸಂಖ್ಯೆ ಕಡಿಮೆ ಇದ್ದ ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ್ದಾರೆ. ಎಲ್ಲ ಜಿಲ್ಲೆಯಲ್ಲೂ ಪೊಲೀಸ್‌ ಬಲ ಸಮ ಪ್ರಮಾಣದಲ್ಲಿ ಇರಬೇಕು ಎಂಬ ಕಾರಣಕ್ಕೆ ಅಂತರ್ಜಿಲ್ಲಾ ವರ್ಗಾವಣೆ ಕೈ ಬಿಡುವ ತೀರ್ಮಾನ ಸರ್ಕಾರ ಕೈಗೊಂಡಿತ್ತು. ಆದರೆ, ಮಾಜಿ ಸೈನಿಕರು, ತಂದೆ, ತಾಯಿ, ಪತ್ನಿ, ಪತಿಗಳಿಗೆ ಸಮಸ್ಯೆ ಆಗುವುದು ಗಮನಕ್ಕೆ ಬಂದಿದೆ. ಅಂಥವರ ಸಮಸ್ಯೆ ಪರಿಹರಿಸಬೇಕು ಎಂಬ ಚಿಂತನೆ ನಡೆದಿದೆ. ವರ್ಗಾವಣೆ ನಿರ್ಬಂಧದಿಂದ ಪತಿ, ಪತ್ನಿ, ತಂದೆ, ತಾಯಿ ಕುಟುಂಬಸ್ಥರಿಗೆ ಆಗುವ ಸಮಸ್ಯೆ ಬಗೆಹರಿಸಬೇಕಾಗಿದೆ. ಈ ಬಗ್ಗೆಯೂ ಚಿಂತನೆ ಇದೆ ಎಂದರು.

ಪಿಎಫ್‌ಐ ನಿಷೇಧದ ಬಳಿಕ ಅಲ್ಲಿ ಕಾಣಿಸಿಕೊಂಡವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಹಿಂದೆ ಸಿಮಿ ನಿರ್ಬಂಧಿಸಿದಾಗ ಪಿಎಫ್‌ಐ ಕಾಣಿಸಿಕೊಂಡಿತು. ಪರಮೇಶ ಮೇಸ್ತಾ ಪ್ರಕರಣವನ್ನು ಸಿಬಿಐ ಮರು ತನಿಖೆಗೆ ಸ್ವತಃ ಅವರ ತಂದೆಯೇ ಹೇಳಿದ್ದಾರೆ. ಕೊಲೆ ಹೌದಾ ಅಲ್ಲವಾ ಎಂಬ ಪ್ರಶ್ನೆ ಇದೆ. ಸರ್ಕಾರದ ಮುಂದೆ ಮರು ತನಿಖೆ ಪ್ರಸ್ತಾವ ಇದೆ. ಶಿರಸಿ ಟ್ರಾಫಿಕ್‌ ಠಾಣೆಗೆ ಸ್ವತಃ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯ ಮಾಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next