Advertisement
ಅವರು ಮಂಗಳವಾರ ಹೆಜಮಾಡಿ ನವಯುಗ ಟೋಲ್ ಪ್ಲಾಜಾ ಬಳಿ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ವತಿಯಿಂದ ನಡೆದ ಟೋಲ್ ವಿರುದ್ಧ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Related Articles
Advertisement
ಈ ಸಂದರ್ಭದಲ್ಲಿ ಮೂಲ್ಕಿಯ ಜೀವನ್ ಶೆಟ್ಟಿ, ಮಧು ಆಚಾರ್ಯ, ಇಕ್ಬಾಲ್ ಅಹಮ್ಮದ್, ಧನಂಜಯ ಮಟ್ಟು, ಶಾಲೆಟ್ ಪಿಂಟೋ, ವಸಂತ್ ಬೆರ್ನಾರ್ಡ್ ಹಳೆಯಂಗಡಿ, ಪುತ್ತು ಬಾವು, ಗುಲಾಂ ಮೊಹಮ್ಮದ್ ಹೆಜಮಾಡಿ, ಜೋಯಲ್ ಡಿ’ಸೋಜಾ ಮತ್ತಿತರರಿದ್ದರು.
ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್ ಪ್ರಸ್ತಾವಿಸಿದರು. ನ್ಯಾಯವಾದಿ ಭಾಸ್ಕರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು 300ಕ್ಕೂ ಮಿಕ್ಕಿದ ಪ್ರತಿಭಟನಕಾರರು ಮೂಲ್ಕಿಯ ಬಸ್ ನಿಲ್ದಾಣದ ಬಳಿ ಸಭೆ ನಡೆಸಿ ಪಾದಯಾತ್ರೆಯಲ್ಲಿ ಟೋಲ್ ಬಳಿ ಆಗಮಿಸಿದರು.
ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್, ಕಾಪು ಸಿಪಿಐ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.ಜಿಲ್ಲಾ ಮೀಸಲು ಪಡೆ ಪೊಲೀಸ್ ತುಕಡಿ, ಅಗ್ನಿಶಾಮಕ ದಳದ ಸಿಬಂದಿ, ಪಡುಬಿದ್ರಿ ಪೊಲೀಸ್ ಠಾಣಾ ಸಿಬಂದಿ ಇದ್ದರು.
ಜಯ ಲಭಿಸುವ ವರೆಗೆ ಹೋರಾಟ ಟೋಲ್ ಸುತ್ತಲಿನ 7ಕಿಮೀ ವ್ಯಾಪ್ತಿಯಲ್ಲಿ ಸಂಪೂರ್ಣ ಸುಂಕ ವಿನಾಯಿತಿ ನೀಡಬೇಕು. ಮೂಲ್ಕಿಗೆ 10 ಕಿ.ಮೀ. ದೂರದಲ್ಲಿರುವ ಎನ್ಐಟಿಕೆ ಬಳಿಯ ಟೋಲ್ ರದ್ದಿಗೆ ರಾಜ್ಯ ಸರಕಾರವು ಕೇಂದ್ರಕ್ಕೆ ಪ್ರಸ್ತಾವನೆ ರವಾನಿಸಿದೆ. ಆದರೆ ಇದಕ್ಕೆ ಕೇಂದ್ರ ಪ್ರತಿಕ್ರಿಯಿಸಿಲ್ಲ. ಜನತೆಗೆ ಜಯ ಲಭಿಸುವ ವರೆಗೆ ಹೋರಾಟ ನಿಲ್ಲಿಸದಿರೋಣ.
-ಐವನ್ ಡಿ’ಸೋಜಾ, ವಿಧಾನಪರಿಷತ್ ಸದಸ್ಯ