Advertisement

ರಾಜ್ಯ ಗಡಿ ವಿವಾದಕ್ಕೆ “ಮಹಾ’ವಕೀಲರ ನೇಮಕ 

12:30 AM Mar 03, 2019 | Team Udayavani |

ಮುಂಬೈ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಶನಿವಾರ ಉನ್ನತ ಅಧಿಕಾರಿಗಳ ಸಮಿತಿಯ ಸಭೆ ನಡೆಸಿದ್ದು, ವಿವಿಧ ಕಾನೂನು ವಿಚಾರಗಳ ಚರ್ಚೆ ನಡೆಸಿದ್ದಾರೆ. ಅಲ್ಲದೆ ಈ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮಹಾರಾಷ್ಟ್ರ ಪ್ರತಿನಿಧಿಸಲು ಹೆಚ್ಚುವರಿ ಹಿರಿಯ ವಕೀಲರನ್ನು ನೇಮಿಸಿದ್ದಾರೆ.

Advertisement

ಸದ್ಯ ಮಹಾರಾಷ್ಟ್ರದ ಪರ ಹಿರಿಯ ವಕೀಲ ಹರೀಶ್‌ ಸಾಳ್ವೆ ವಾದಿಸುತ್ತಿದ್ದಾರೆ. ಹೆಚ್ಚುವರಿ ವಕೀಲರನ್ನು ನೇಮಿಸಿದ ನಂತರ ದೆಹಲಿಯಲ್ಲಿ ವಕೀಲರು ಸಭೆ ನಡೆಸಿ, ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮದ ಕುರಿತು ಚರ್ಚಿಸಲಿದ್ದಾರೆ.

ಇನ್ನೊಂದೆಡೆ, ವಿವಾದಿತ ನಿರ್ಧಾರವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದ್ದು, ಗಡಿ ಭಾಗದ 865 ಗ್ರಾಮಗಳಲ್ಲಿ ವಾಸಿಸುತ್ತಿರುವವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠ ಕೋಟಾ ನೀಡುವ ಕುರಿತೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಭಾಗದಲ್ಲಿರುವ ಸಮುದಾಯಗಳಿಗೆ ಶೇ.16 ಮರಾಠ ಕೋಟ ಲಭ್ಯವಾಗಲಿದೆ. ಮರಾಠಿ ಮಾತನಾಡುವ ನಾಗರಿಕರು ವಾಸಿಸುತ್ತಿರುವ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಜಿಲ್ಲೆಯ ಗ್ರಾಮಗಳನ್ನೂ ಸೇರಿಸಿ 865 ಗ್ರಾಮಗಳು ಎಂದು ಮಹಾರಾಷ್ಟ್ರ ಈ ಹಿಂದೆಯೇ ಪಟ್ಟಿ ಮಾಡಿದೆ. ಸಭೆಯಲ್ಲಿ ಕಂದಾಯ ಸಚಿವ ಚಂದ್ರಕಾಂತ ಪಾಟೀಲ, ಉದ್ಯಮ ಸಚಿವ ಸುಭಾಷ್‌ ದೇಸಾಯಿ ಮತ್ತು ವಿಪಕ್ಷ ನಾಯಕ ಧನಂಜಯ್‌ ಮುಂಡೆ ಕೂಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next