Advertisement

ಆರ್ಥಿಕ ನೆರವಿಗಾಗಿ ಸಚಿವರಿಗೆ ಮನವಿ

01:29 PM May 11, 2020 | Suhan S |

ಹುಬ್ಬಳ್ಳಿ: ವಕೀಲರ ಗುಮಾಸ್ತರಿಗೆ ಸರಕಾರದಿಂದ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರಿಗೆ ಜಿ.ಆರ್‌. ಅಂದಾನಿಮಠ ಲಾ ಅಕಾಡೆಮಿಯಿಂದ ಮನವಿ ಸಲ್ಲಿಸಲಾಗಿದೆ.

Advertisement

ವಕೀಲರ ಗುಮಾಸ್ತರು ವಕೀಲರ ಕಾರ್ಯದಲ್ಲಿ ಅವಿಭಾಜ್ಯ ಅಂಗವಾಗಿದ್ದು, ಲಾಕ್‌ಡೌನ್‌ನಿಂದ ಅವರ ಸ್ಥಿತಿ ಹೇಳತೀರದಾಗಿದೆ. ವಕೀಲರ ಗುಮಾಸ್ತರಿಗೆ ಯಾವುದೇ ವೇತನ ಇರುವುದಿಲ್ಲ. ಬದಲಾಗಿ ಕಕ್ಷಿದಾರರು ನೀಡಿರುವ ಹಣವೇ ಅವರ ಜೀವನಕ್ಕೆ ಆಧಾರ. ಆದರೆ ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಗಣಕಯಂತ್ರ ದಾಖಲೆಯಾಗುತ್ತಿದ್ದು, ಇವರುಗಳಿಗೆ ಉದ್ಯೋಗವಿಲ್ಲದಂತಾಗಿದೆ.

ಆದ್ದರಿಂದ ವಕೀಲರ ಗುಮಾಸ್ತರಿಗೆ ಸರಕಾರದಿಂದ ಆರ್ಥಿಕ ನೆರವು ಕಲ್ಪಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಹುಬ್ಬಳ್ಳಿ ವಕೀಲರ ಕಾರಕೂನರ ಸಂಘದ ಅಧ್ಯಕ್ಷ ಬಸಯ್ಯ ಹಿರೇಮಠ, ಕಾರ್ಯದರ್ಶಿ ಪ್ರಕಾಶ ಅರಗಂಜಿ, ಪ್ರಕಾಶ ಅಂದಾನಿಮಠ, ಡಾ| ವಿನೋದ ಕುಲಕರ್ಣಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next