Advertisement

ರೈಲ್ವೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಸದರಿಗೆ ಮನವಿ

03:47 PM Jul 28, 2019 | Suhan S |

ಬಾದಾಮಿ: ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ರೈಲ್ವೆ ಬೇಡಿಕೆ ಈಡೇರಿಕೆಗಾಗಿ ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಐತಿಹಾಸಿಕ ಬಾದಾಮಿ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ, ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಮತ್ತು ನಿಲ್ದಾಣ ಆಧುನೀಕರಣಗೊಳಿಸುವಂತೆ ಒತ್ತಾಯಿಸಲಾಯಿತು.

ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಚಾಲುಕ್ಯರ ರಾಜಧಾನಿ ಬಾದಾಮಿಗೆ ಪ್ರತಿ ನಿತ್ಯ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಬಾದಾಮಿ ಮೂಲಕ ಹಾಯ್ದು ಹೋಗುವ ಗದಗ-ಮುಂಬೈ, ಮೈಸೂರು-ಶಿರಡಿ, ಯಶವಂತಪುರ- ಬಿಕಾನೇರ ಸೇರಿದಂತೆ ಎಲ್ಲ ರೈಲುಗಳು ನಿಲುಗಡೆಯಾಗಬೇಕು. ಬಾದಾಮಿಯಿಂದ ಬಾಗಲಕೋಟೆ ಮಧ್ಯದಲ್ಲಿ ಬರುವ ರಸ್ತೆಗಳಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕು. ಪ್ಲಾಟ್ಫಾರಂ 1, 2 ವಿಸ್ತರಣೆ ಮಾಡಬೇಕು, ಡಿಸ್‌ ಪ್ಲೇ ಮತ್ತು ದೀಪದ ವ್ಯವಸ್ಥೆ ಮಾಡಬೇಕು, ಮಹಿಳಾ ವಿಶ್ರಾಂತಿ ಕೊಠಡಿ ಸ್ಥಾಪನೆ, ಪ್ರತ್ಯೇಕ ಮುಂಗಡ ಕಾಯ್ದಿರಿಸುವಿಕೆ ಟಿಕೆಟ್ ಕೌಂಟರ್‌, ಎಟಿಎಂ ಸೌಲಭ್ಯ ಮತ್ತು ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಹೋರಾಟ ಸಮಿತಿ ಮೂಲಕ ಮನವಿ ಸಲ್ಲಿಸಲಾಯಿತು.

ಸಮಿತಿ ಅಧ್ಯಕ್ಷ ಎಂ.ಎಸ್‌. ಹಿರೇಹಾಳ, ಕಾರ್ಯದರ್ಶಿ ಇಷ್ಟಲಿಂಗ ನರೇಗಲ್, ಸದಸ್ಯರಾದ ಎಂ.ಎಸ್‌. ಲೋಕಾಪುರ, ಮಹಾಂತೇಶ ವಡ್ಡರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next