Advertisement

ಯೋಧರ ಅರ್ಜಿ ವಜಾ

06:00 AM Dec 01, 2018 | Team Udayavani |

ನವದೆಹಲಿ: ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ ಜಾರಿಯಲ್ಲಿರುವಂಥ ಮಣಿಪುರ ಮತ್ತು ಜಮ್ಮು-ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ಯೋಧರ ವಿರುದ್ಧ ಎಫ್ಐಆರ್‌ ದಾಖಲು ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದೆ. ಸುಮಾರು 350 ಯೋಧರು ಈ ಅರ್ಜಿಗಳನ್ನು ಸಲ್ಲಿಸಿದ್ದರು. ಇವರ ಕೋರಿಕೆಗೆ ಕೇಂದ್ರ ಸರ್ಕಾರವೂ ಬೆಂಬಲ ನೀಡಿತ್ತಲ್ಲದೆ, ಭಯೋತ್ಪಾದನೆ ವಿರುದ್ಧ ಹೋರಾಡುವಾಗ ನಮ್ಮ ಯೋಧರ ಕೈಗಳಲ್ಲಿ ನಡುಕ ಬರಬಾರದು ಎಂದರೆ ಅದಕ್ಕೊಂದು ಸೂಕ್ತ ಮಾರ್ಗಸೂಚಿ ಇರಬೇಕು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಾರ್ಗಸೂಚಿ ತರದಂತೆ ನಿಮ್ಮನ್ನು ತಡೆದವರು ಯಾರು, ಇದು ನೀವು ಚರ್ಚಿಸಬೇಕಾದ ವಿಚಾರ ಎಂದಿತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next