Advertisement

ಅರ್ಚಕರಿಗೆ ವಿಶೇಷ ಸಹಾಯಧನಕ್ಕೆ ಮನವಿ

12:56 AM Jun 05, 2020 | Sriram |

ಮಂಗಳೂರು: ಲಾಕ್‌ಡೌನ್‌ನಿಂದಾಗಿ ರಾಜ್ಯಾದ್ಯಂತ ಸುಮಾರು ಒಂದು ಸಾವಿರ ಬಬ್ಬುಸ್ವಾಮಿ ದೈವಸ್ಥಾನ ಗಳು ಮುಚ್ಚಿದ್ದು, ಇದರಿಂದ ಅಲ್ಲಿ ಪೂಜೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಅರ್ಚಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ.

Advertisement

ಆದ್ದರಿಂದ ಸರಕಾರವು ಅವರಿಗೆ ವಿಶೇಷ ಸಹಾಯಧನ ಮಂಜೂರು ಮಾಡಬೇಕೆಂದು ಕೋರಿ ಕಣ್ಣೂರು ಶ್ರೀ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಗೋಕುಲ್‌ದಾಸ್‌ ಬಾರ್ಕೂರು ಅವರು ಸಂಸದ ನಳಿನ್‌ಕುಮಾರ್‌ ಕಟೀಲು ಅವರಿಗೆ ಮನವಿ ಸಲ್ಲಿಸಿದರು.

ಉಡುಪಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ದಿನಕರ ಬಾಬು, ಕಚ್ಚಾರು ದೇಗುಲದ ಪದಾಧಿಕಾರಿಗಳಾದ ಶಿವಪ್ಪ ನಂತೂರು, ಪಿ. ಬಾಬು ಸೂಟರ್‌ಪೇಟೆ, ಜನಾರ್ದನ ಸಾಲ್ಯಾನ್‌ ಬಿಜೈ ಮತ್ತಿತರರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next