Advertisement

ಸಿಡಿಲಿಗೆ ಬಲಿಯಾದ ಕುರಿಗಾರರ ಕುಟುಂಬಕ್ಕೆ ಪರಿಹಾರಕ್ಕೆ ಮನವಿ

02:50 PM Apr 21, 2022 | Team Udayavani |

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಚಿರಲದಿನ್ನಿ ಗ್ರಾಮ ಬಳಿ ಸೋಮವಾರ ಸಿಡಿಲು ಬಡಿದು ಚಿಕ್ಕೋಡಿ ಮೂಲದ ಕುರಿಗಾರರು ಹಾಗೂ ಕುರಿಗಳು ‌ಮೃತಪಟ್ಟಿವೆ. ಮೃತರ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾ ಕುರಿಗಾರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಜೋಡಕುರಳಿ ಗ್ರಾಮದ ಸಂಚಾರಿ ಕುರಿಗಾರರಾದ ಬೀರಪ್ಪ ಬಡೆಗೋಳ, ಮಹೇಶ ಬಡೆಗೊಳ ಮೃತಪಟ್ಟಿದ್ದಾರೆ. ಅಲ್ಲದೆ ಅವರ 9 ಕುರಿಗಳು ಮೃತಪಟ್ಟಿವೆ. ಇವರನ್ನೇ ನಂಬಿದ್ದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸಂಚಾರಿ ಬಡ ಕುರಿಗಾರರ ಕುಟುಂಬಗಳಿಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಕೂಡಲೇ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ನಿಧಿಯಿಂದ ತಲಾ 5 ಲಕ್ಷ ರೂ. ಹಾಗೂ ಸಾವಿಗೀಡಾದ ಪ್ರತಿ ಕುರಿಗೆ 15 ಸಾವಿರ ರೂ.ದಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.

ಕುರಿಗಾರ ಸಂಘದ ಜಿಲ್ಲಾಧ್ಯಕ್ಷ ಬೀರಪ್ಪ ಜುಮನಾಳ, ರಾಯಣ್ಣ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ದೇವಕಾಂತ ಬಿಜ್ಜರಗಿ, ಬಸವರಾಜ ಕಂಕಣವಾಡಿ, ನಿವರ್ತಿ ಯರನಾಳ, ಗೋಲ್ಲಾಳೇಶ್ವರ ಕಗ್ಗೂಡ, ಪರಶುರಾಮ ರೋಣಿಹಾಳ, ದುಂಡಪ್ಪ ಗೊಳಸಂಗಿ, ಸಂತೋಷ ಬೂದಿಹಾಳ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next