Advertisement

ಸುಶಾಂತ್ ಮತ್ತು ತಂದೆ ನಡುವೆ ವೈಮನಸ್ಸು? ರಾವತ್ ಆರೋಪಕ್ಕೆ ಸಹೋದರ ಆಕ್ರೋಶ

03:12 PM Aug 10, 2020 | Nagendra Trasi |

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ತಂದೆ ಜತೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲವಾಗಿತ್ತು. ಅದಕ್ಕೆ ಕಾರಣ ತಂದೆ ಎರಡನೇ ಮದುವೆಯಾಗಿದ್ದು ಸುಶಾಂತ್ ಅಸಮಧಾನಕ್ಕೆ ಕಾರಣವಾಗಿತ್ತು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ನೀಡಿರುವ ಹೇಳಿಕೆಗೆ ಸುಶಾಂತ್ ಸಹೋದರ ನೀರಜ್ ಬಬ್ಲು ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

Advertisement

ಸುಶಾಂತ್ ಸಿಂಗ್ ತಂದೆ ಎರಡನೇ ವಿವಾಹವಾಗಿದ್ದಾರೆ ಎಂಬ ಆರೋಪ ಸಂಪೂರ್ಣ ಸುಳ್ಳು. ಒಂದು ವೇಳೆ ಶಿವಸೇನಾ ಮುಖಂಡ ರಾವತ್ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಸುಶಾಂತ್ ಕುಟುಂಬ ಕಾನೂನು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದೆ.

ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲು ಸಂಜಯ್ ರಾವತ್ ವಿರೋಧಿಸಿದ್ದರು. ತನಿಖೆಯಲ್ಲಿ ಸುಶಾಂತ್ ಮತ್ತು ತಂದೆ ಕೆಕೆ ಸಿಂಗ್ ನಡುವೆ ಉತ್ತಮ ಬಾಂಧವ್ಯ ಇಲ್ಲ ಎಂಬುದು ಬಹಿರಂಗವಾಗಿದೆ ಎಂದು ರಾವತ್ ದೂರಿದ್ದರು. ಸುಶಾಂತ್ ಎಷ್ಟು ಬಾರಿ ತಂದೆಯನ್ನು ಭೇಟಿಯಾಗಿದ್ದರು ಎಂಬುದಾಗಿ ಪ್ರಶ್ನಿಸಿದ್ದರು.

ಮುಂಬೈ ಪೊಲೀಸರು ಈಗಾಗಲೇ ತನಿಖೆ ನಡೆಸಿದ್ದರು. ಆದರೆ ಮುಂಬೈನಲ್ಲಿ ನಡೆದ ಘಟನೆ ಬಗ್ಗೆ ಪಾಟ್ನಾದಲ್ಲಿ ಎಫ್ ಐಆರ್ ದಾಖಲಿಸಿದ್ದರು. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ 40 ದಿನದ ನಂತರ ಸುಶಾಂತ್ ಕುಟುಂಬ ಪ್ರಕರಣದ ಬಗ್ಗೆ ಎಚ್ಚೆತ್ತುಕೊಂಡಿತ್ತು ಎಂದು ರಾವತ್ ಕಿಡಿಕಾರಿದ್ದಾರೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next