Advertisement

ಎಪಿಎಂಸಿ ವಹಿವಾಟು ಆರಂಭ

04:32 PM Apr 18, 2020 | Suhan S |

ಗಜೇಂದ್ರಗಡ: ಕೋವಿಡ್ 19 ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತೂಮ್ಮೆ ಲಾಕ್‌ಡೌನ್‌ ಮುಂದುವರಿಸಿದೆ. ಇದರ ಮಧ್ಯೆಯೇ ಪಟ್ಟಣದ ಎಪಿಎಂಸಿಯಲ್ಲಿ ಶುಕ್ರವಾರದಿಂದ ವಹಿವಾಟು ಕಾರ್ಯ ಆರಂಭಗೊಂಡಿದೆ.

Advertisement

ರಾಜ್ಯ ಸರ್ಕಾರ ಕೃಷಿ ಚಟುವಟಿಕೆಗಳಿಗೆ ವಿನಾಯತಿ ಮತ್ತು ಎಪಿಎಂಸಿ ವಹಿವಾಟಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿ ವಾರದಲ್ಲಿ ಸೋಮವಾರ, ಗುರುವಾರ ಮತ್ತು ಶನಿವಾರ ಸೇರಿ ಮೂರು ದಿನಗಳ ಕಾಲ ತೆರೆಯಲಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆವರೆಗೆ ರೈತರಿಂದ ಬೆಳೆ ಪಡೆದುಕೊಳ್ಳಬಹುದು. ಬೆಳಗ್ಗೆ 11ರಿಂದ 12 ಗಂಟೆವರೆಗೆ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ.

ಎಪಿಎಂಸಿ ವಹಿವಾಟು ಶುಕ್ರವಾರದಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ಶೇಂಗಾ ಆವಕ ಹೆಚ್ಚಾಗಿ ಬಂದಿದ್ದು, ವರ್ತಕರು ಖರೀದಿಸುವಲ್ಲಿ ತಲ್ಲೀನರಾಗಿದ್ದಾರೆ. ಆದರೆ ಎಪಿಎಂಸಿ ಆವರಣದಲ್ಲಿ ಬಹುತೇಕ ಅಂಗಡಿಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಆತಂಕ ಸೃಷ್ಟಿಸಿದೆ.

ಪಕ್ಕದ ಜಿಲ್ಲೆ ಬಾಗಲಕೋಟೆಯಲ್ಲಿ ಕೋವಿಡ್ 19 ತೀವ್ರ ಸ್ವರೂಪ ಪಡೆದಿದೆ. ಆ ಜಿಲ್ಲೆಯ ಹಲವಾರು ಗ್ರಾಮಗಳ ರೈತರು ಪಟ್ಟಣದ ಎಪಿಎಂಸಿಗೆ ಬೆಳೆ ಮಾರಾಟಕ್ಕೆ ತರುತ್ತಾರೆ. ಹೀಗಾಗಿ ಇಲ್ಲಿನ ವರ್ತಕರು ಮತ್ತು ಶ್ರಮಿಕರು ಅಗತ್ಯ ಮಾಸ್ಕ್ ಧರಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next