Advertisement

ಕಣಿವೆ ರಾಜ್ಯದಲ್ಲಿ ಯಾರೇ ಶಾಂತಿ ಕದಡಿದ್ರೂ ಅವರಿಗೆ ತಕ್ಕ ಶಾಸ್ತಿ: ಪಾಕ್ ಗೆ ಭಾರತೀಯ ಸೇನೆ

09:19 AM Aug 10, 2019 | Team Udayavani |

ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕೆ ಕುಮ್ಮಕ್ಕು ನೀಡಿ ಕಾಶ್ಮೀರದಲ್ಲಿ ಯಾರೇ ಆಗಲಿ ಶಾಂತಿ ಕದಡುವ ಪ್ರಯತ್ನ ಮಾಡಿದಲ್ಲಿ ಅಂತಹವರನ್ನು ಕೊನೆಗಾಣಿಸುವುದಾಗಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಶುಕ್ರವಾರ ಎಚ್ಚರಿಕೆಯ ಸಂದೇಶ ರವಾನಿಸಿದೆ.

Advertisement

ಕಣಿವೆ ರಾಜ್ಯದಲ್ಲಿ ಪಾಕಿಸ್ತಾನ ಮತ್ತು ಅದರ ಸೇನೆ ಯಾವಾಗಲೂ ಶಾಂತಿ ಕದಡುವ ಕೆಲಸದಲ್ಲಿ ಶಾಮೀಲಾಗಿರುತ್ತದೆ. ಅಲ್ಲದೇ ಅದನ್ನು ಮುಂದುವರಿಸುವುದು ಅದರ ಚಾಳಿಯಾಗಿದೆ ಎಂದು ಸಂದರ್ಶನವೊಂದರಲ್ಲಿ ಭಾರತೀಯ ಸೇನಾಪಡೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಕಣಿವೆ ಪ್ರದೇಶದಲ್ಲಿನ ಬೆಳವಣಿಗೆ ಬಗ್ಗೆ ಪಾಕಿಸ್ತಾನ ಬೆದರಿಕೆ ಹಾಕುತ್ತಿರುವುದನ್ನು ಈ ಹಿಂದಿನಿಂದಲೂ ಇದ್ದಿದ್ದು, ಇನ್ಮುಂದೆ ಅಂತಹ ದುಸ್ಸಾಹಸಕ್ಕೆ ಅವಕಾಶ ಕೊಡಲ್ಲ. ಯಾರೇ ಆಗಲಿ ಕಣಿವೆ ಪ್ರದೇಶಕ್ಕೆ ಬಂದು ಶಾಂತಿ ಕದಡಲು ಪ್ರಯತ್ನಿಸುತ್ತಾರೋ ಅಂತಹವರನ್ನು ಕೊನೆಗಾಣಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next