Advertisement

ಅನ್ವೇಷಣಾ- 2024: ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಸಾಧನೆ

09:54 AM Feb 17, 2024 | Team Udayavani |

ಶಿರ್ವ: ಧಾರವಾಡದ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಫೆ.13 ಮತ್ತು 14 ರಂದು ನಡೆದ ವಲಯ ಮಟ್ಟದ ಅನ್ವೇಷಣಾ-2024 ಸ್ಪರ್ಧೆಯಲ್ಲಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮೊದಲ ಐದು ವಿಜೇತ ತಂಡಗಳಲ್ಲಿ ಮೊದಲ, ಮೂರನೆಯ ಹಾಗೂ ಐದನೆಯ ವಿಜೇತ ತಂಡವಾಗಿ ಒಟ್ಟು ರೂ. 30,000/- ಬಹುಮಾನ ಪಡೆದು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ.

Advertisement

ಈ ಸ್ಪರ್ಧೆಯಲ್ಲಿ ದಕ್ಷಿಣ ವಲಯದಿಂದ 40 ತಂಡಗಳು ಭಾಗವಹಿಸಿದ್ದವು. ಕರ್ನಾಟಕ ರಾಜ್ಯದ ನಾಲ್ಕು ವಲಯಗಳಲ್ಲಿ ಮೊದಲ ಹಂತದ ಸ್ಪರ್ಧೆ ನಡೆಸಿ ಅದರಲ್ಲಿ ವಿಜೇತರಾದ ತಂಡಗಳು ಫೆ.27 ರಿಂದ 29ರ ತನಕ ಬೆಂಗಳೂರಿನಲ್ಲಿ ಎರಡನೇ ಹಾಗೂ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ.

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆ್ಯಂಡ್‌ ಮೆನ್‌ ಲರ್ನಿಂಗ್‌ ಡಾಟಾ ಸೈನ್ಸ್‌ ವಿಭಾಗ ಮುಖ್ಯಸ್ಥರಾದ ನಾಗರಾಜರಾವ್‌ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಜಯ್‌ರಾವ್‌ ಮತ್ತು ಧನುಷ್‌ ಶಾಸ್ತ್ರಿ ಅವರು ಹಿರಿಯಡ್ಕದ ಕೆಪಿಎಸ್‌ ಪ್ರೌಢಶಾಲಾ ವಿದ್ಯಾರ್ಥಿಗಳಾದ ನಾಗರಾಜ್‌ ಮತ್ತು ಆಯುಷ್‌ ಶೆಟ್ಟಿ ಅವರೊಂದಿಗೆಅಭಿವೃದ್ಧಿ ಪಡಿಸಿದ ಎ ಪ್ರಿಸಿಶನ್‌ ಕ್ರಾಪ್‌ ಪಲ್ಸ್‌-ಅಗ್ರಿಟೆಕ್‌ ಎಂಬ ಪ್ರಾಜೆಕ್ಟ್ ಗೆ ಪ್ರಥಮ ಸ್ಥಾನ ಗಳಿಸಿದೆ.

ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಜಿ ಎಸ್‌.ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪೂಜಾ. ವಿ ಮತ್ತು ವಿಕ್ರಮ್‌ ಪೂಜಾರಿ ಅವರು ಇನ್ನಂಜೆಯ ಎಸ್‌ ವಿಎಸ್‌ ಪ್ರೌಢಶಾಲಾ ವಿದ್ಯಾರ್ಥಿಗಳಾದ ಮನ್ವಿತ್‌ ಮತ್ತು ಹರೀಶ್‌ ಅವರೊಂದಿಗೆ ಅಭಿವೃದ್ಧಿ ಪಡಿಸಿದ ಎಪಿನೆಕ್ಟ್ ಪ್ರಾಜೆಕ್ಟ್ ಗೆ 3ನೇ ಸ್ಥಾನ ಗಳಿಸಿದೆ.

Advertisement

ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಸದಾನಂದ .ಎಲ್‌ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ನಿಶಿತಾ ಬಿ. ರಾವ್‌ ಮತ್ತು ಪಂಚಮಿ ಹೆಬ್ಟಾರ್‌ ಅವರು ಒಳಕಾಡು ಜಿ ಎಚ್‌ಎಸ್‌ ಪ್ರೌಢಶಾಲಾ ವಿದ್ಯಾರ್ಥಿಗಳಾದ ವಿಶ್ವ ಮತ್ತು ಆಶ್ಲೇಷ್‌ ಅವರೊಂದಿಗೆ ಅಭಿವೃದ್ಧಿ ಪಡಿಸಿದ ಟ್ರ್ಯಾಶ್‌ಟ್ರ್ಯಾಕರ್‌ ಪ್ರಾಜೆಕ್ಟ್ ಗೆ 5ನೇ ಸ್ಥಾನ ಹಾಗೂ ಬಂಟಕಲ್‌ ವಿದ್ಯಾಸಂಸ್ಥೆಯ ಭೂಷಣ್‌ ಪೂಜಾರಿ ಮತ್ತು ಕೆ. ಅನುಷಾ ವಿ. ಪ್ರಭು ಅವರು ಕಾರ್ಕಳದ ಭುವನೇಂದ್ರ ಪ್ರೌಢಶಾಲಾ ವಿದ್ಯಾರ್ಥಿಗಳಾದ ಸಿದ್ದರಾಜು ಮತ್ತು ಶ್ರೀವರ ಅವರೊಂದಿಗೆ ಅಭಿವೃದ್ಧಿ ಪಡಿಸಿದ ಪ್ರಾಜೆಕ್ಟ್ ಗೆ ಸಮಾಧಾನಕರ ಬಹುಮಾನ ದೊರೆತಿದೆ.

ಅನ್ವೇಷಣಾ-2024 ಸ್ಪರ್ಧೆ ಸ್ಪರ್ಧೆಯು ಆವಿಷ್ಕಾರಗಳಿಗೆ ಸೇತುವೆ ನಿರ್ಮಾಣ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಾಗಿದ್ದು, ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಸಿನೋಪ್ಸಿಸ್‌, ಅಗಸ್ತ್ಯ ಅಂತರಾಷ್ಟ್ರೀಯ ಫೌಂಡೇಶನ್‌ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಂಟಿಯಾಗಿ ಈ ಸ್ಪರ್ಧೆಯನ್ನು ಪ್ರಾಯೋಜಿಸುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತೀತಂಡದ ನಾಲ್ಕು ವಿದ್ಯಾರ್ಥಿಗಳಲ್ಲಿ ಇಬ್ಬರು ಸಮೀಪದ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿರಬೇಕು ಎಂಬ ನಿಯಮವು ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನದ ಅಭಿವೃದ್ಧಿಗೆ ಸಹಕಾರಿಯಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿ ವರ್ಗ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next