Advertisement

National Award ಕೈತಪ್ಪಿದ ರಾಷ್ಟ್ರಪ್ರಶಸ್ತಿ, ನಟ ಅನುಪಮ್‌ ಖೇರ್‌ ಬೇಸರ

10:11 PM Aug 25, 2023 | Team Udayavani |

ನವದೆಹಲಿ: ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ “ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ಪ್ರತಿಷ್ಠಿತ ನರ್ಗೀಸ್‌ ದತ್‌ ಪ್ರಶಸ್ತಿಗೆ ಭಾಜನವಾದ ಹಿನ್ನೆಲೆಯಲ್ಲಿ ಸಿನಿಮಾದ ಪ್ರಮುಖ ಪಾತ್ರಧಾರಿಯಾಗಿರುವ ಹಿರಿಯ ನಟ ಅನುಪಮ್‌ ಖೇರ್‌ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಇದೇ ವೇಳೆ ತಮಗೆ ರಾಷ್ಟ್ರಪ್ರಶಸ್ತಿ ಕೈತಪ್ಪಿರುವುದರ ಬಗ್ಗೆಯೂ ಖೇರ್‌ ಬೇಸರ ವ್ಯಕ್ತ ಪಡಿಸಿದ್ದಾರೆ. ಪ್ರಶಸ್ತಿ ಕುರಿತು ಟ್ವೀಟ್‌ ಮಾಡಿದ ಖೇರ್‌, ದಿ ಕಾಶ್ಮೀರಿ ಫೈಲ್ಸ್‌ ಚಿತ್ರ ರಾಷ್ಟ್ರ ಪ್ರಶಸ್ತಿಗೆ ಅದರಲ್ಲೂ ರಾಷ್ಟ್ರೀಯ ಏಕೀಕರಣದ ಚಿತ್ರದ ಸಾಲಿನಲ್ಲಿ ಗುರುತಿಸಿಕೊಂಡಿದ್ದರ ಬಗ್ಗೆ ಹೆಮ್ಮೆ ಇದೆ. ನಟನಾಗಿ ಮಾತ್ರವಲ್ಲದೇ, ಚಿತ್ರದ ಕಾರ್ಯಕಾರಿ ನಿರ್ಮಾಪಕನಾಗಿ ಈ ವಿಚಾರ ಬಹಳ ಸಂತಸ ತಂದಿದೆ. ಅದೇ ರೀತಿ ನನ್ನ ನಟೆನೆಗೂ ರಾಷ್ಟ್ರಪ್ರಶಸ್ತಿ ಬರಬಹುದೆಂದು ಭಾವಿಸಿದ್ದೆ! ಆದರೆ, ಅಂದುಕೊಂಡಿದ್ದೆಲ್ಲವೂ ಕೈಗೂಡಿಬಿಟ್ಟರೇ ಮುಂದೆ ಕೆಲಸ ಮಾಡಲು ಉತ್ಸಾಹ ಎಲ್ಲಿಂದ ಬರಬೇಕು? ಇರಲಿ, ಮುಂದಿನ ಬಾರಿ ನೋಡೋಣ..ಪ್ರಶಸ್ತಿಯ ಪ್ರತಿ ವಿಜೇತರಿಗೂ ನನ್ನ ಹೃದಯಾಂತರಾಳದ ಅಭಿನಂದನೆಗಳು ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next