Advertisement

ಇಂದಿನಿಂದ ಕಾಸರಗೋಡಿನಲ್ಲಿ ನಿಲುಗಡೆ

06:00 AM Jul 06, 2018 | Team Udayavani |

ಕಾಸರಗೋಡು: ವಿವಿಧ ರಾಜಕೀಯ ಪಕ್ಷಗಳ, ಸಂಘಸಂಸ್ಥೆಗಳ ಹೋರಾ ಟದ ಫಲವಾಗಿ ಲಭಿಸಿದ ಅನುಮತಿಯ ಹಿನ್ನೆಲೆಯಲ್ಲಿ ಜು. 6ರಿಂದ ಕಾಸರಗೋಡು ರೈಲು ನಿಲ್ದಾಣದಲ್ಲಿ ಅಂತ್ಯೋದಯ ಎಕ್ಸ್‌ ಪ್ರಸ್‌ ರೈಲು ನಿಲುಗಡೆಗೊಳ್ಳಲಿದೆ. 13 ಬಾರಿ ಕಾಸರಗೋಡು ನಿಲ್ದಾಣದಲ್ಲಿ ರೈಲು ನಿಲ್ಲಿಸದೆ ಹೋಗಿದ್ದ ಅಂತ್ಯೋದಯ ಎಕ್ಸ್‌ಪ್ರೆಸ್‌ ರೈಲುಗಾಡಿಯನ್ನು 14ನೇ ಸಂಚಾರದಲ್ಲಿ ಜಿಲ್ಲಾ ಕೇಂದ್ರದಲ್ಲಿ ನಿಲ್ಲಿಸಲಾಗುತ್ತಿದೆ.

Advertisement

ಅಧಿಕೃತವಾಗಿ 13ನೇ ಸಂಚಾರದ ಬಳಿಕ ಕಾಸರಗೋಡಿನಲ್ಲಿ ನಿಲುಗಡೆಗೊಳಿಸ ಲಾಗುತ್ತಿದೆ. ಈ ಮಧ್ಯೆ ಎರಡು ಬಾರಿ ಸಿಗ್ನಲ್‌ ಲಭಿಸದೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಈ ರೈಲುಗಾಡಿಯನ್ನು ನಿಲ್ಲಿಸಲಾಗಿತ್ತು. ಅಂತ್ಯೋದಯ ಎಕ್ಸ್‌ ಪ್ರಸ್‌ ರೈಲು ಗಾಡಿಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಲುಗಡೆಗೊಳಿಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು ಆಯೋಜಿಸಿದ ಚಳವಳಿಯ ಅಂಗವಾಗಿ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ರೈಲಿನ ಚೈನ್‌ ಎಳೆದಿದ್ದರು. ಈ ಕಾರಣದಿಂದ ಜೂನ್‌ 22 ರಂದು ರೈಲು ಗಾಡಿ ನಿಲುಗಡೆಗೊಂಡಿತ್ತು. ಅಂದು ಬೆಳಗ್ಗೆ 8 ಗಂಟೆಗೆ ರೈಲು ನಿಂತಿತ್ತು. ಅಂದು ಮುಸ್ಲಿಂ ಲೀಗ್‌ ಕಾರ್ಯಕರ್ತರು ರೈಲು ಹಳಿಯಲ್ಲಿ ಕುಳಿತು ರೈಲುಗಾಡಿಯನ್ನು ಸುಮಾರು 15 ನಿಮಿಷಗಳ ತನಕ ತಡೆದಿದ್ದರು.

ಜೂನ್‌ 9ರಂದು ರಾತ್ರಿ 9.39ಕ್ಕೆ ಅಂತ್ಯೋದಯ ರೈಲುಗಾಡಿ ಕಾಸರ ಗೋಡಿಗೆ ತಲುಪಿತ್ತು. ಈ ಗಾಡಿಯ ಮುಂಚಿತ ವಾಗಿ ಇನ್ನೊಂದು ರೈಲು ಗಾಡಿ ಹೋಗಿದ್ದರಿಂದ ಈ ಗಾಡಿಗೆ ಸಿಗ್ನಲ್‌ ಲಭಿಸಿರಲಿಲ್ಲ. ಈ ಕಾರಣದಿಂದ ಅಂದು ರೈಲುಗಾಡಿಯನ್ನು ಕಾಸರಗೋಡಿನಲ್ಲಿ ನಿಲುಗಡೆಗೊಳಿಸಲಾಗಿತ್ತು.

ಶುಕ್ರವಾರ ಬೆಳಗ್ಗೆ ಕಾಸರಗೋಡು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿರುವ ಅಂತ್ಯೋದಯ ಎಕ್ಸ್‌ಪ್ರೆಸ್‌ ರೈಲುಗಾಡಿಗೆ ಭವ್ಯ ಸ್ವಾಗತ ನೀಡಲು ಪ್ರಯಾಣಿಕರು ಸಿದ್ಧತೆ ನಡೆಸಿದ್ದಾರೆ.

ರೈಲು ಗಾಡಿ ಪ್ರವರ
– ರೈಲು ಗಾಡಿ ನಂಬ್ರಗಳು : 16355/16356
– ಒಟ್ಟು ದೂರ 614 ಕಿ.ಮೀ., 7 ನಿಲ್ದಾಣಗಳಲ್ಲಿ  ನಿಲುಗಡೆ
– ಮಂಗಳೂರಿಗೆ ಶುಕ್ರವಾರ ಮತ್ತು ರವಿವಾರ, 
ಸಮಯ ಬೆಳಗ್ಗೆ 7.48/7.50
– ಕೊಚ್ಚುವೇಳಿಗೆ ಶುಕ್ರವಾರ ಮತ್ತು ರವಿವಾರ, 
          ಸಮಯ ರಾತ್ರಿ 8.43/8.45
– ಕೊಚ್ಚುವೇಳಿಯಿಂದ ಮಂಗಳೂರಿಗೆ 
         11.50 ಗಂಟೆಯೊಳಗೆ ತಲುಪುವುದು
– ಬುಕ್‌ ಮಾಡದೇ ಸೀಟುಗಳಿದ್ದರೆ 
          ಟಿಕೆಟ್‌ ಪಡೆದು ಪ್ರಯಾಣಿಸಬಹುದು
– 16 ಕೋಚ್‌ಗಳಲ್ಲೂ ಸೀಟುಗಳಿವೆ
– ಎಕ್ಸ್‌ಪ್ರೆಸ್‌ ಕೋಚ್‌ಗಳಲ್ಲಿರುವ ಜನರಲ್‌ ಟಿಕೆಟ್‌ 
          ದರದ ಶೇ. 15ರಷ್ಟು ಮಾತ್ರವೇ ಹೆಚ್ಚಳ
– ಆಧುನಿಕ ಎಲ್‌ಎಚ್‌ಬಿ ಕೋಚ್‌ಗಳನ್ನು 
         ಬಳಸಿಕೊಂಡು   ನಿರ್ಮಿಸಿದ ದೀನದಯಾಳ್‌ ಕೋಚ್‌ಗಳು
– ಶುದ್ಧೀಕರಿಸಿದ ಕುಡಿಯುವ ನೀರು, ಮೊಬೈಲ್‌ 
         ರಿಚಾರ್ಜಿಂಗ್‌, ಲಗೇಜ್‌ ರ್ಯಾಕ್‌, ಬಯೋ ಟಾಯ್ಲೆಟ್‌ 
         ಮೊದಲಾದ ಸೌಕರ್ಯಗಳಿವೆ.

Advertisement

ಕಾಸರಗೋಡಿನಿಂದ 
ಅಂತ್ಯೋದಯ ಎಕ್ಸ್‌ಪ್ರೆಸ್‌ನ 
ಪ್ರಯಾಣ ದರ
ಕೊಚ್ಚುವೇಳಿ – 210 ರೂ.
ಕೊಲ್ಲಂ – 190 ರೂ.
ಎರ್ನಾಕುಳಂ ಜಂಕ್ಷನ್‌ – 145 ರೂ.
ತೃಶ್ಶೂರು – 130 ರೂ.
ಶೋರ್ನೂರು – 125 ರೂ.
ಕಲ್ಲಿಕೋಟೆ – 95 ರೂ.
ಕಣ್ಣೂರು – 70 ರೂ.
ಮಂಗಳೂರು ಜಂಕ್ಷನ್‌ – 55 ರೂ.

Advertisement

Udayavani is now on Telegram. Click here to join our channel and stay updated with the latest news.

Next