Advertisement
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ನೇರವಾಗಿ ಮಧ್ಯಪ್ರದೇಶದ ನೂತನ ಸಿಎಂ ಕಮಲ್ನಾಥ್ರನ್ನೇ ಗುರಿಯಾಗಿಸಿ ಕೊಂಡು ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. ಸಿಕ್ಖರ ಪ್ರಕಾರ, ಕಮಲ್ನಾಥ್ ಕೂಡ ತಮ್ಮ ಸಮುದಾಯದವರ ವಿರುದ್ಧ ಹಿಂಸಾಚಾರ ನಡೆಸಿದ ದೋಷಿ. ವಿಚಿತ್ರವೆಂದರೆ, ಈ ತೀರ್ಪು ಬಂದ ದಿನವೇ ಕಮಲ್ನಾಥ್ ಮಧ್ಯಪ್ರದೇಶ ಸಿಎಂ ಹುದ್ದೆ ಅಲಂಕರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
Related Articles
Advertisement
2013ರಲ್ಲಿ ದೋಷಮುಕ್ತ: ನಾನಾವತಿ ಆಯೊಧೀಗದ ವರದಿ ನಂತರ 2010ರಲ್ಲಿ ಸಜ್ಜನ್ ಕುಮಾರ್ ಮತ್ತು ಇತರೆ ಆರು ಮಂದಿ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆ ಶುರುವಾಗಿತ್ತು. ಆದರೆ, 2013ರಲ್ಲಿ ತೀರ್ಪು ಪ್ರಕಟಿಸಿದ್ದ ಕೋರ್ಟ್, ಸಜ್ಜನ್ಕುಮಾರ್ ಅವರನ್ನು ದೋಷ ಮುಕ್ತ ಎಂದಿತ್ತು. ಆದರೆ, ಇತರೆ ಆರು ಮಂದಿಯನ್ನು ದೋಷಿಗಳು ಎಂದು ತೀರ್ಪು ನೀಡಿತ್ತು. ಇದರ ವಿರುದ್ಧ ಸಿಬಿಐ ಮೇಲ್ಮ ನವಿ ಸಲ್ಲಿಸಿದ್ದರಿಂದ ದಿಲ್ಲಿ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಎಸ್.ಮುರಳೀ ಧರ್ ಮತ್ತು ವಿನೋದ್ ಗೋಯಲ್ ಪೀಠ ವಿಚಾರಣೆ ನಡೆಸಿ ಈಗ ತೀರ್ಪು ನೀಡಿದೆ. ಜತೆಗೆ ಹತ್ಯೆ ವೇಳೆ ಪ್ರತ್ಯಕ್ಷದರ್ಶಿಗಳು ಮತ್ತು ಅವರ ಕುಟುಂಬ ಸದಸ್ಯರೇ ಆಗಿದ್ದ ಜಗದೀಶ್ ಕೌರ್, ಜಗ್ಶೀರ್ ಸಿಂಗ್ ಮತ್ತು ನಿರ್ಪ್ರೀತ್ ಕೌರ್ ಅವರ ಛಲಬಿಡದ ಹೋರಾಟದ ಬಗ್ಗೆಯೂ ದ್ವಿಸದಸ್ಯ ಪೀಠ ಶ್ಲಾಘನೆ ವ್ಯಕ್ತಪಡಿಸಿದೆ. ಘಟನೆಯ ಪ್ರತ್ಯಕ್ಷದರ್ಶಿ ಜಗದೀಶ್ ಕೌರ್ ಅವರ ಪತಿ, ಪುತ್ರ ಮತ್ತು ಮೂವರು ಸಂಬಂಧಿ ಗಳಾದ ಕೇಹರ್ ಸಿಂಗ್, ಗುಪೀìತ್ ಸಿಂಗ್, ರಘುವೀರ್ ಸಿಂಗ್, ನರೇಂ ದರ್ ಪಾಲ್ ಸಿಂಗ್ ಮತ್ತು ಕುಲ ದೀಪ್ ಸಿಂಗ್ ಅವರನ್ನು 1984ರ ನ.2 ರಂದು ಹತ್ಯೆ ಮಾಡಲಾಗಿತ್ತು. ಈ ಎಲ್ಲಾ ಅಪ ರಾಧಿಗಳು ನಿರ್ಪ್ರೀತ್ ಅವರ ತಂದೆಯನ್ನು ಜೀವಂತ ವಾಗಿ ಸುಟ್ಟು, ಗುರುದ್ವಾರಕ್ಕೆ ಬೆಂಕಿ ಇಟ್ಟಿದ್ದರು. ಇದನ್ನ ಕಣ್ಣಾರೆ ಕಂಡಿದ್ದಾಗಿ ನಿರ್ ಪ್ರೀತ್ ಸಿಂಗ್ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದರು.
ಐತಿಹಾಸಿಕ ತೀರ್ಪು ನೀಡಿದ ಹೈಕೋರ್ಟ್ಗೆ ಆಭಾರಿಯಾಗಿ ದ್ದೇನೆ. ಇಂದು ಸಜ್ಜನ್ಕುಮಾರ್ಗೆ ಶಿಕ್ಷೆಯಾಗಿದೆ. ನಾಳೆ ಜಗದೀಶ್ ಟೈಟ್ಲರ್, ಮತ್ತೂಂದು ದಿನ ಕಮಲ್ನಾಥ್ಗೂ ಶಿಕ್ಷೆಯಾಗ ಬಹುದು. ಇಡೀ ಘಟನೆ ಸಂಬಂಧ ಗಾಂಧಿ ಕುಟುಂಬವಷ್ಟೇ ಉತ್ತರ ನೀಡಬೇಕು.– ಹರ್ಸಿಮ್ರತ್ ಕೌರ್, ಕೇಂದ್ರ ಸಚಿವೆ ಸ್ವತಂತ್ರ ಭಾರತದಲ್ಲಿನ ಕೋಮು ಸಂಘರ್ಷ ಘಟನೆಯಾಗಿದ್ದ ಸಿಖ್ ವಿರೋಧಿ ದಂಗೆ ಸಂಬಂಧ ಸಂತ್ರಸ್ತರಿಗೆ ಕಡೆಗೂ ನ್ಯಾಯ ಸಿಕ್ಕಿದೆ. ಆದರೆ, ಈ ದಂಗೆಯಲ್ಲಿ ಗಾಂಧಿ ಕುಟುಂಬವಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಪಾಲ್ಗೊಂಡಿಲ್ಲ.
– ಅಮರೀಂದರ್, ಪಂಜಾಬ್ ಸಿಎಂ