Advertisement

ಬಿಜೆಪಿ ವಿರೋಧಿ ಗಾಳಿ ಬೀಸುತ್ತಿದೆ

06:00 AM Oct 31, 2018 | |

ಶಿವಮೊಗ್ಗ: ಎಲ್ಲಾ ಕಡೆ ಬಿಜೆಪಿಗೆ ವಿರುದ್ಧವಾದ ಗಾಳಿ ಬೀಸುತ್ತಿದೆ. ಯಡಿಯೂರಪ್ಪ, ಈಶ್ವರಪ್ಪ ಎಷ್ಟೇ ಹೇಳಿಕೊಳ್ಳಬಹುದು. ಅವರು ಯಾವುದೇ ಸಭೆಯಲ್ಲೂ ಅಭಿವೃದ್ಧ ವಿಷಯದಲ್ಲಿ ಪ್ರಚಾರ ಮಾಡುತ್ತಿಲ್ಲ. ಈ ವಿಷಯ ಎಲ್ಲೂ ಚರ್ಚೆ ಯಾಗುತ್ತಿಲ್ಲ. ಏಕೆಂದರೆ
ಬಿಜೆಪಿಗರು ನುಡಿದಂತೆ ನಡೆ ದವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

Advertisement

ನಗರದ ಎನ್‌ಇಎಸ್‌ ಮೈದಾನದಲ್ಲಿ ನಡೆದ ಕಾಂಗ್ರೆಸ್‌- ಜೆಡಿಎಸ್‌ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 2008ರಿಂದ 2013ರವರೆಗೆ ಬಿಜೆಪಿಯ ಮೂವರು ಮುಖ್ಯಮಂತ್ರಿಯಾಗಿದ್ದಾರೆ. ಯಡಿಯೂರಪ್ಪ ಸ್ವ-ಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿಲ್ಲ. ಬದಲಿಗೆ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಬೇಕಾದ್ದರಿಂದ ರಾಜೀ ನಾಮೆ ನೀಡಿದರು. ಇನ್ನೊಬ್ಬರು ಜೈಲಿಗೆ ಹೋಗಿ ಬಂದವರು ನನಗೆ ಶಾಪ ನೀಡಿದ್ದರಿಂದಲೇ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತರು, ಅವರ ಕುಟುಂಬಕ್ಕೆ ತೊಂದರೆಯಾಯಿತು ಎಂದಿದ್ದಾರೆ. ಅವರಿಗೆ ನಾಚಿಕೆಯಾಗ ಬೇಕು ಎಂದರು. ಯಡಿಯೂರಪ್ಪ ಮಂತ್ರಿ ಮಂಡಲದ ಹಲವರು ಜೈಲಿಗೆ ಹೋದರು. ಇನ್ನೂ ಕೆಲವರು ಬೇಲ್‌ ಮೇಲೆ ಹೊರಗಿದ್ದಾರೆ. ಐದು ವರ್ಷ ಲೂಟಿ ಹೊಡೆದಿದ್ದು ಬಿಟ್ಟರೆ ಅಭಿವೃದ್ಧಿ ಮಾಡಿಲ್ಲ. ಯಡಿಯೂರಪ್ಪ, ಈಶ್ವರಪ್ಪ ಪೈಪೋಟಿ ಮೇಲೆ ಆಸ್ತಿ ಮಾಡುತ್ತಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗುವಾಗಲೂ ವಿಕ್ಟರಿ ಸಿಂಬಲ್‌ ತೋರಿಸುತ್ತಾರೆ. ಬರುವಾಗಲೂ ವಿಕ್ಟರಿ ಸಿಂಬಲ್‌ ತೋರಿಸುತ್ತಾರೆ. ಅದೇಕೆ ಎಂಬುದೇ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next