Advertisement

ಸರ್ಜಿಕಲ್‌ ದಾಳಿ ಮೂಲಕ ಪಾಕ್‌ಗೆ ತಕ್ಕ ಉತ್ತರ

11:20 PM May 04, 2019 | Lakshmi GovindaRaj |

ಗಂಗಾವತಿ: ಭಾರತ, ಶ್ರೀಲಂಕಾ ಸೇರಿ ದಕ್ಷಿಣ ಏಷ್ಯಾದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರಿಗೆ ಪಾಕಿಸ್ತಾನದಲ್ಲಿ ನೆಲೆ ಸಿಗುತ್ತಿರುವುದು ಘೋರ ಅನ್ಯಾಯ. ಸರ್ಜಿಕಲ್‌ ದಾಳಿ ಮೂಲಕ ಭಾರತದ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ ಎಂದು ಪೇಜಾವರ ಶ್ರೀಗಳು ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಲಾಲ್‌ ಬಹದ್ದೂರ್‌ ಶಾಸ್ತ್ರಿ, ಇಂದಿರಾ ಗಾಂಧಿ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಅವರು ಸೈನಿಕ ದಾಳಿ ಮೂಲಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ್ದರೂ ಸುಧಾರಿಸಿಲ್ಲ. ಸರ್ಜಿಕಲ್‌ ದಾಳಿ ನಡೆಸಿದ ಸೈನಿಕರು ಮತ್ತು ಪ್ರಧಾನಿ ಮೋದಿಯವರು ಅಭಿನಂದನಾರ್ಹರು.

ಭಾರತ ದೈವಿಭೂಮಿಯಾಗಿದ್ದು, ಇಲ್ಲಿಯ ಪ್ರಜೆಗಳು ಧರ್ಮ ಮಾರ್ಗದಲ್ಲಿ ನಡೆಯುವವರು. ಇಡೀ ಜಗತ್ತು ಸುಖ-ಶಾಂತಿಯಿಂದ ಇರಬೇಕೆನ್ನುವ ಮನೋಭಾವದವರು. ಶ್ರೀಲಂಕಾದಲ್ಲಿ ಜರುಗಿದ ಚರ್ಚ್‌ ದಾಳಿ ಖಂಡನೀಯ. ಇಂತಹ ಕೃತ್ಯಕ್ಕೆ ಕಾರಣರಾದವರನ್ನು ಭಾರತ ಸೇರಿ ವಿಶ್ವದ ರಾಷ್ಟ್ರಗಳು ಸುಮ್ಮನೆ ಬಿಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next