Advertisement

‘ಅನ್ಸರುಲ್ಲಾ’ಕೇಸ್‌: ಎನ್‌ಐಎ ಕಾರ್ಯಾಚರಣೆ

02:18 AM Jul 21, 2019 | sudhir |

ಚೆನ್ನೈ:ಇತ್ತೀಚೆಗೆ ಬೆಳಕಿಗೆ ಬಂದ ಅನ್ಸರುಲ್ಲಾ ಎಂಬ ಉಗ್ರ ಸಂಘಟನೆ ರಚನೆಯ ಸಂಚಿನ ಪ್ರಕರಣದ ಭಾಗವಾಗಿ ಎನ್‌ಐಎ ಶನಿವಾರ ತಮಿಳುನಾಡಿನ 14 ಕಡೆಗಳಲ್ಲಿ ಶೋಧ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾದಿಂದ ಗಡೀಪಾರಾಗಿ ಭಾರತಕ್ಕೆ ಬಂದ 14 ಜನರ ಮನೆಗಳ ಮೇಲೆ ಈ ದಾಳಿ ನಡೆದಿದೆ.

Advertisement

ರಾಮನಾಥಪುರಂ ಜಿಲ್ಲೆಯಲ್ಲಿ ಐದು ಕಡೆ, ಥೇಣಿ, ಚೆನ್ನೈ, ಮಧುರೈ, ತಿರುನಲ್ವೇಲಿ, ತಂಜಾವೂರು, ಪೆರಂಬಲೂರು, ನಾಗಪಟ್ಟಣಂ ಹಾಗೂ ತಿರುವರೂರಿನ ಒಂದು ಕಡೆಗಳಲ್ಲಿ ಶೋಧ ನಡೆಸಲಾಗಿದೆ. ಶಂಕಿತರು ಐಸಿಸ್‌, ಅಲ್ ಖೈದಾ ಮತ್ತು ಸಿಮಿ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 16 ಶಂಕಿತರನ್ನು ಎನ್‌ಐಎ ಬಂಧಿಸಿದೆ. ಇವರಿಗೆ ಶ್ರೀಲಂಕಾ ಸ್ಫೋಟದ ಸಂಚುಕೋರರೊಂದಿಗೆ ಸಂಪರ್ಕವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಲ್ಯಾಪ್‌ಟಾಪ್‌, ಏಳು ಮೊಬೈಲ್ ಫೊನ್‌ಗಳು, ಐದು ಸಿಮ್‌ ಕಾರ್ಡ್‌ಗಳು, ಮೂರು ಮೆಮೊರಿ ಕಾರ್ಡ್‌, ಒಂದು ಹಾರ್ಡ್‌ ಡಿಸ್ಕ್, ಎರಡು ಪೆನ್‌ ಡ್ರೈವ್‌ಗಳು, ಡಿವಿಡಿಗಳು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next