Advertisement

ಮಂಗನ ಕಾಯಿಲೆಗೆ ಮತ್ತೋರ್ವ ಮಹಿಳೆ ಬಲಿ

01:00 AM Mar 04, 2019 | Team Udayavani |

ಸಾಗರ: ಮಹಾಮಾರಿ ಮಂಗನ ಕಾಯಿಲೆ ಮತ್ತೂಂದು ಬಲಿ ಪಡೆದಿದೆ. ಸಾಗರ ತಾಲೂಕಿನ ನಂದೋಡಿಯ ಸೀತಮ್ಮ ಪ್ರಗತಿಕೆರೆ (58) ರವಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೂರು ದಿನಗಳಲ್ಲಿ ಈ ಕಾಯಿಲೆಗೆ ಮೂರು ಮಂದಿ ಬಲಿಯಾದಂತಾಗಿದೆ. ಸಾಗರ ತಾಲೂಕಿನಲ್ಲಿ ಕಾಯಿಲೆ ಕಾಣಿಸಿಕೊಂಡಾಗಿನಿಂದ ಈ ವರೆಗೆ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. 

Advertisement

ತೀವ್ರ ಜ್ವರ, ಉಸಿರಾಟದ ಸಮಸ್ಯೆಗೊಳಗಾಗಿದ್ದ ಇವರನ್ನು ಶನಿವಾರ ಮಧ್ಯರಾತ್ರಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಎಫ್‌ಡಿ ಲಸಿಕೆಯ ಪ್ರಥಮ ಮತ್ತು ಬೂಸ್ಟ್‌ ಅಪ್‌ ಡೋಸ್‌ ಪಡೆದಿದ್ದ ಸೀತಮ್ಮ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next