Advertisement

ಇನ್ನೊಂದು ನಿರ್ಭಯಾ: ಅಮಾನುಷ ಅತ್ಯಾಚಾರ; ದಲಿತ ಬಾಲಕಿ ಸಾವು

11:43 AM Jan 15, 2018 | udayavani editorial |

ಜಿಂದ್‌, ಹರಿಯಾಣ : ಹರಿಯಾಣದ ಜಿಂದ್‌ ನಲ್ಲಿ ಮತ್ತೂಂದು ನಿರ್ಭಯಾ ಪ್ರಕರಣ ನಡೆದಿದೆ. ಹತ್ತನೇ ತರಗತಿಯ, ಹದಿಹರೆಯದ ದಲಿತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯ ದೇಹವನ್ನು ಛಿದ್ರಗೊಳಿಸಲಾದ ಅತ್ಯಮಾನುಷ ಘಟನೆ ವರದಿಯಾಗಿದೆ. ತನಗಾದ ಮಾರಣಾಂತಿಕ ಗಾಯಗಳಿಂದ ಬಾಲಕಿಯು ದಾರುಣ ಸಾವನ್ನು ಕಂಡಿದ್ದಾಳೆ. ಅಂತೆಯೇ ಇದು 2012ರ ದಿಲ್ಲಿಯ ನಿರ್ಭಯಾ ಗ್ಯಾಂಗ್‌ ರೇಪ್‌ ಪ್ರಕರಣದ ಪುನರಾವರ್ತನೆಯಾಗಿದೆ.

Advertisement

ಆರಂಭಿಕ ತನಿಖೆಯ ಪ್ರಕಾರ ಬಾಲಕಿಯ ಮೇಲೆ ಅತ್ಯಾಚಾರ ನಡಸಿದ ಬಳಿಕ ಆಕೆಯ ಗುಪ್ತಾಂವನ್ನು ಛಿದ್ರಗೊಳಿಸಲಾಗಿದೆ. ಆಕೆಯ ದೇಹದಲ್ಲಿ ಹಲವಾರು ಗಾಯಗಳು ಕಂಡು ಬಂದಿವೆ. ಆಕೆಯ ಮೇಲೆ ಕನಿಷ್ಠ 3ರಿಂದ 4 ಮಂದಿ ಕಾಮುಕರು ಸೇರಿ ಲೈಂಗಿಕ ದೌರ್ಜನ್ಯ, ಚಿತ್ರ ಹಿಂಸೆ ನೀಡಿರುವು ಆಕೆಯ ದೇಹದ ಮೇಲಾಗಿರುವ ಗಾಯಗಳಿಂದ ಸ್ಪಷ್ಟವಾಗುತ್ತದೆ. ಆಕೆಯ ಗುಪ್ತಾಂಗದೊಳಗೆ ವಿಕೃತ ಕಾಮುಕರು ಯಾವುದೊಂದು ಒಂದು ಗಟ್ಟಿ ವಸ್ತುವನ್ನು ತುರುಕಿದ್ದಾರೆ. ಆಕೆಯನ್ನು ನೀರಲ್ಲಿ ಮುಳುಗಿಸಿ ತೆಗೆದಿರುವ ಕುರುಹು ಕೂಡ ಕಂಡು ಬಂದಿದೆ ಎಂದು ಪಿಜಿಐ ರೋಹಟಕ್‌ನಿಂದ ಡಾ. ಎಸ್‌ ಕೆ ದತ್ತಾರ್‌ವಾಲ್‌ ಹೇಳಿದ್ದಾರೆ. 

ಪೊಲೀಸರು ಐಪಿಸಿ ಸೆ.302ರ ಪ್ರಕಾರ ಕೊಲೆ ಕೇಸನ್ನು ದಾಖಲಿಸಿಕೊಂಡಿದ್ದಾರೆ; ಎರಡು ವಿಶೇಷ ತನಿಖಾ ತಂಡಗಳನ್ನು ರೂಪಿಸಿಲಾಗಿದೆ ಎಂದು ಡಿವೈಎಸ್ಪಿ ಕಪ್ತಾನ್‌ ಸಿಂಗ್‌ ತಿಳಿಸಿದ್ದಾರೆ.  

“ನನ್ನ ಮಗಳನ್ನು ಅಪಹರಿಸಿ ರೇಪ್‌ ಮಾಡಲಾಗಿದೆ. ಇದನ್ನು ಮಾಡಿದವರಿಗೆ ಕಠಿನ ಶಿಕ್ಷೆಯಾಗಬೇಕು; ನಮಗೆ ನ್ಯಾಯ ಬೇಕು; ಆಡಳಿತವು ಒಂದೊಮ್ಮೆ ತನ್ನ ಕೆಲಸವನ್ನು ಸರಿಯಾಗಿ ಮಾಡಿರುತ್ತಿದ್ದರೆ ಇಂತಹ ಹೇಯ ಘಟನೆ ನಡೆಯುತ್ತಿರಲಿಲ್ಲ’ ಎಂದು ನತದೃಷ್ಟ ಬಾಲಕಿಯ ತಂದೆ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next