Advertisement

ಅಮರನಾಥ ಯಾತ್ರೆ ಕಡೆ ಮತ್ತೊಂದು ಹೊಸ ಬಾಚ್‌ ರವಾನೆ: ಬಿಗಿ ಭದ್ರತೆ

09:27 PM Jul 16, 2022 | Team Udayavani |

ಶ್ರೀನಗರ: ಜಮ್ಮು ನಗರದಿಂದ ಅಮರನಾಥ ಯಾತ್ರೆಗೆ ಹೊಸ ಬ್ಯಾಚ್‌ ರವಾನೆಯಾಗಿದೆ. ಈ ಬ್ಯಾಚ್‌ನಲ್ಲಿ ಒಟ್ಟು 5,800 ಜನರಿದ್ದು, ಅವರು ಎರಡು ಬೇಸ್‌ ಕ್ಯಾಂಪ್‌ ಗಳಾದ ಪಹಲ್ಗಾಮ್‌ ಹಾಗೂ ಬಲ್ತಾಲ್‌ನಿಂದ ಅಮರನಾಥ ಗುಹೆಯತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಯಾತ್ರಾರ್ಥಿಗಳ ಸುರಕ್ಷತೆಗಾಗಿ ಬಿಗಿ ಭದ್ರತೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವಾರ, ಅಮರನಾಥ ಗುಹೆಯಿರುವ ಪ್ರಾಂತ್ಯದಲ್ಲಿ ಭಾರೀ ಮಳೆ ಸುರಿದು, ಪ್ರವಾಹದಂಥ ಪರಿಸ್ಥಿತಿ ಏರ್ಪಟ್ಟಿತ್ತು. ಆಗ, ಯಾತ್ರಾರ್ಥಿಗಳಲ್ಲಿ 15 ಜನರು ಸಾವನ್ನಪ್ಪಿದ್ದರು.

ಅದರಿಂದಾಗಿ, ಯಾತ್ರೆಯನ್ನು ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಪುನಃ ಯಾತ್ರೆಯನ್ನು ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next