Advertisement

ಕೋವಿಡ್‌ 19 ಸೋಂಕಿಗೆ ಮತ್ತೊಂದು ಸಾವು

07:44 AM Jul 01, 2020 | Lakshmi GovindaRaj |

ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ ಮೂವರಿಗೆ ಕೋವಿಡ್‌ 19 ಸೋಂಕಿನ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 122ಕ್ಕೆ ಏರಿದೆ. ನಾಲ್ಕು ಮಂದಿ ಸೇರಿ ಒಟ್ಟು ಗುಣಮುಖರಾದವರ ಸಂಖ್ಯೆ 57 ಕ್ಕೇರಿದಂತಾಗಿದೆ. ಸಕ್ರಿಯ  ಪ್ರಕರಣಗಳ ಸಂಖ್ಯೆ 63 ಆಗಿದೆ. ತುರ್ತು ನಿಗಾ ಘಟಕದಲ್ಲಿ ಇಬ್ಬರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಓರ್ವ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಮಂಗಳವಾರ ಸೋಂಕಿತರಾದ ಪ್ರಕರಣಗಳಲ್ಲಿ ಕೋಲಾರ, ಬಂಗಾರಪೇಟೆ  ಮತ್ತು ಕೆಜಿಎಫ್‌ ತಲಾ ಒಂದೊಂದು ಪಾಸಿಟೀವ್‌ ಆಗಿದೆ. ಕೆಜಿಎಫ್‌ನ 59 ವರ್ಷದ ಪುರುಷ ಬೆಂಗಳೂರಿಗೆ ಹೋಗಿ ಬಂದಿದ್ದು, ಉಸಿರಾಟದ ತೊಂದರೆ ಯಿಂದಾಗಿ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಬಂಗಾರಪೇಟೆಯ  ಅಂತಾರಾಜ್ಯ ಪ್ರವಾಸದ ಹಿನ್ನೆಲೆ ಹೊಂದಿರುವ 41 ವರ್ಷದ ಪುರುಷ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರ ನಗರದ ಆರೋಗ್ಯ ಕಾರ್ಯಕರ್ತ 37 ವರ್ಷದ ಪುರುಷ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು,  ಮೂವರ ಆರೋಗ್ಯವೂ ಸ್ಥಿರವಾಗಿದೆ.

ಜಿಲ್ಲೆಯಲ್ಲಿ ಈಗ ಪ್ರಸ್ತುತ 2009 ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ 11434 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 10495 ಮಾದರಿಗಳು ನೆಗಟೀವ್‌ ಎಂದು  ವರದಿಯಾಗಿದೆ. ಸೋಂಕಿತರು ಇದ್ದ ಪ್ರದೇಶವನ್ನು ಸ್ಥಳೀಯ ಸಂಸ್ಥೆ, ಪೊಲೀಸರು ಸೀಲ್‌ ಡೌನ್‌ ಮಾಡಿದ್ದು, ಕೋಲಾರದ ಪಿ.9945 ಮಾಲೂರು-ಪಿ8811, ಬಂಗಾರಪೇಟೆ- ಪಿ.8807, ಪಿ.8812 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.

ತಾಲೂಕಿನಲ್ಲಿ ಕೋವಿಡ್‌ 19ಗೆ ಮೊದಲ ಬಲಿ, ಆತಂಕ
ಶ್ರೀನಿವಾಸಪುರ: ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೇ ತಾಲೂಕಿನ ತಮ್ಮಿರೆಡ್ಡಿ ಗಾರಿಪಲ್ಲಿಯ 37 ವರ್ಷದ ಕೋವಿಡ್‌ 19 ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ತಾಲೂಕು ನೆಲವಂಕಿ ಹೋಬಳಿ ಲಕ್ಷ್ಮೀಪುರ ಗ್ರಾಮ  ಪಂಚಾಯ್ತಿ ವ್ಯಾಪ್ತಿಯ ತಮ್ಮಿರೆಡ್ಡಿಗಾರಿಪಲ್ಲಿ ಗ್ರಾಮದ ವ್ಯಕ್ತಿಗೆ ಸೋಂಕು ತಗುಲಿದ್ದು, ಈತ ಬೆಂಗಳೂರಿನಿಂದ ಜೂ.23ರಂದು ಸ್ವಗ್ರಾಮಕ್ಕೆ ಬಂದಿದ್ದಾಗ ಕೆಲವರ ಮಾಹಿತಿ ಮೇರೆಗೆ ಈತನು ಜೂ.24ರಂದು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟಿದ್ದ.

ಆಗ ನೆಗೆಟೀವ್‌  ವರದಿ ಕಂಡು ಬಂದಿತು. ನಂತರ ಈತ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ 26 ರಂದು ಪರೀಕ್ಷೆ ಮಾಡಿಸಿದ್ದು, ಸೋಂಕು ದೃಢಪಟ್ಟಿತು. ಅಲ್ಲಿಯೇ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next