Advertisement

ನೀಟ್‌ ಮಿಸ್‌ ಆದ ಕರ್ನಾಟಕದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ: ಸಚಿವ ಜಾವಡೇಕರ್‌

04:50 PM May 07, 2019 | Team Udayavani |

ಹೊಸದಿಲ್ಲಿ : ರೈಲು ವಿಳಂಬದಿಂದಾಗಿ ನೀಟ್‌ ಪರೀಕ್ಷೆ ಬರೆಯಲಾಗದ ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆ ಬರೆಯಲು ಇನ್ನೊಂದು ಅವಕಾಶ ನೀಡಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಇಂದು ಸೋಮವಾರ ಪ್ರಕಟಿಸಿದ್ದಾರೆ.

Advertisement

ನಿನ್ನೆ ಭಾನುವಾರ ಹಂಪಿ ಎಕ್ಸ್‌ಪ್ರೆಸ್‌ ಏಳು ತಾಸು ತಡವಾಗಿ ಸಂಚರಿಸಿದ ಪರಿಣಾಮವಾಗಿ ಕರ್ನಾಟಕದ ನೂರಾರು ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.

ರೈಲು ವಿಳಂಬದಿಂದಾಗಿ ನೀಟ್‌ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕೆಂಬ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರ ಆಗ್ರಹಕ್ಕೆ ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಧ್ವನಿಗೂಡಿಸಿದ್ದರು.

ಇದೀಗ ನೀಟ್‌ ಮಿಸ್‌ ಮಾಡಿಕೊಂಡ ಕರ್ನಾಟಕದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ ನೀಡಲಾಗುವುದೆಂದು ಕೇಂದ್ರ ಸಚಿವ ಜಾವಡೇಕರ್‌ ಟ್ವೀಟ್‌ ಮಾಡಿರುವುದಕ್ಕೆ ಪ್ರತಿಯಾಗಿ ಸಿಎಂ ಕುಮಾರಸ್ವಾಮಿ “ನಮ್ಮ ಕೋರಿಕೆ ಪರಿಗಣಿಸಿದ್ದಕ್ಕೆ ನಿಮಗೆ ಧನ್ಯವಾದ’ ಎಂದು ಮರು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next