Advertisement

ಪುನೀತ್‌ಗೆ ಅರುಗೌಡ ವಿಲನ್‌

10:49 AM Mar 04, 2019 | Team Udayavani |

ಪುನೀತ್‌ರಾಜಕುಮಾರ್‌ ಅಭಿನಯದ “ಯುವರತ್ನ’ ಚಿತ್ರಕ್ಕೆ ಒಬ್ಬೊಬ್ಬರೇ ಸೇರ್ಪಡೆಯಾಗುತ್ತಿದ್ದಾರೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ, “ಡಾಲಿ’ ಖ್ಯಾತಿಯ ಧನಂಜಯ್‌ ಅವರು ಚಿತ್ರಕ್ಕೆ ಸೇರ್ಪಡೆಯಾಗಿರುವ ವಿಷಯ ಗೊತ್ತೇ ಇದೆ. ಧನಂಜಯ್‌ ಅವರಿಲ್ಲಿ ಖಳನಟರಾಗಿ ನಟಿಸುತ್ತಿದ್ದಾರೆ.

Advertisement

ಈಗ ಮತ್ತೂಬ್ಬ ನಾಯಕ ಖಳನಟರಾಗಿ ಪುನೀತ್‌ ಎದುರು ನಿಲ್ಲಲು ಸಜ್ಜಾಗಿದ್ದಾರೆ. ಹೌದು, ಅರುಗೌಡ ಅವರು “ಯುವರತ್ನ’ ಚಿತ್ರದಲ್ಲಿ ವಿಲನ್‌ ಆಗಿ ನಟಿಸುತ್ತಿದ್ದಾರೆ. ಇನ್ನು, ಚಿತ್ರದಲ್ಲಿ ಮತ್ತೂಬ್ಬ ಖಳನಟ ಕೂಡ ನಟಿಸುತ್ತಿದ್ದಾರೆ. ಅದು ಜಾನ್‌ಕೊಕೇನ್‌. ಈಗಾಗಲೇ ಪುನೀತ್‌ ಅವರ “ಪೃಥ್ವಿ’ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಜಾನ್‌ಕೊಕೇನ್‌ ಅವರಿಲ್ಲಿ ಪ್ರಮುಖ ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಅರುಗೌಡ ಕೂಡ ಎಂಟ್ರಿಯಾಗಿದ್ದಾರೆ.

ಸದ್ಯಕ್ಕೆ “ಯುವರತ್ನ’ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಅರುಗೌಡ ಅವರು ಇತ್ತೀಚೆಗೆ ಚಿತ್ರೀಕರಣ ವೇಳೆ ಪುನೀತ್‌ ಮತ್ತು ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರೊಂದಿಗೆ ಫೋಟೋ ತೆಗೆಸಿಕೊಂಡು, ಚಿತ್ರದಲ್ಲಿ ಖಳನಟರಾಗಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಅವಕಾಶ ಸಿಕ್ಕಿದ್ದಕ್ಕೆ ಚಿತ್ರತಂಡದವರಿಗೆ ಧನ್ಯವಾದ ಹೇಳಿದ್ದಾರೆ.

ಅರುಗೌಡ ಇಲ್ಲಿ ನೆಗೆಟಿವ್‌ ಶೇಡ್‌ ಪಾತ್ರದಲ್ಲಿ ನಟಿಸುತ್ತಿದ್ದು, ಪುನೀತ್‌ ಅವರ ವಿರುದ್ಧದ ಗ್ಯಾಂಗ್‌ನಲ್ಲಿ ಅರುಗೌಡ ಕಾಣಿಸಿಕೊಳ್ಳಲಿದ್ದಾರೆ. ಸುಮಾರು 15 ದಿನಗಳ ಕಾಲ ಅರುಗೌಡ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಿತ್ರದಲ್ಲಿ ಸಯೇಶಾ ಸೈಗಲ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next