Advertisement

Odisha; ಮತ್ತೋರ್ವ ಆರೋಪಿಯ ಬಂಧನ

01:16 AM Jun 15, 2023 | Team Udayavani |

ಮಂಗಳೂರು: ನಾಗುರಿ ಬಳಿ ಕಳೆದ ವರ್ಷದ ನವೆಂಬರ್‌ನಲ್ಲಿ ಸಂಭವಿಸಿದ್ದ ಕುಕ್ಕರ್‌ ಬಾಂಬ್‌ ಪ್ರಕರಣದ ಆರೋಪಿಯೊಂದಿಗೆ ನಂಟು ಹೊಂದಿದ್ದ ಒಡಿಶಾ ಮೂಲದ ಪ್ರೀತಂಕಾರ್‌ (31) ಎಂಬಾತನನ್ನು ಒಡಿಶಾದ ಸ್ಪೆಷಲ್‌ ಟಾಸ್ಕ್ ಫೋರ್ಸ್‌ ಬಂಧಿಸಿದೆ.

Advertisement

ಪ್ರೀತಂಕಾರ್‌ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್‌ ಶಾರೀಕ್‌ಗೆ ಸಿಮ್‌ ಕಾರ್ಡ್‌ ನೀಡಿದ್ದ ಎನ್ನಲಾಗಿದೆ. ಪ್ರೀತಂಕಾರ್‌ಗೆ ಪಾಕಿಸ್ಥಾನದ ಐಎಸ್‌ಐ ಏಜೆಂಟ್‌ಗಳ ಜತೆ ಸಂಪಕವಿತ್ತು. ಈತ ರಾಂಚಿ ಮತ್ತು ಪಟ್ನಾದಲ್ಲಿ ಐಎಸ್‌ಐ ಏಜೆಂಟ್‌ಗಳನ್ನು ಭೇಟಿಯಾಗಿ ಅವರಿಗೂ ಸಿಮ್‌ ಕಾರ್ಡ್‌ ನೀಡಿದ್ದ. ಆತ ಎಂಟನೇ ತರಗತಿ ಕಲಿತಿದ್ದು 2017ರಿಂದ ಸೈಬರ್‌ ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದರು. ಮಹಮ್ಮದ್‌ ಶಾರೀಕ್‌ ಕೂಡ ಗಂಭೀರವಾಗಿ ಗಾಯಗೊಂಡಿದ್ದ. ಪ್ರಕರಣದ ತನಿಖೆಯನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ನಡೆಸುತ್ತಿದ್ದು ಶಾರೀಕ್‌ನನ್ನು ಈ ಹಿಂದೆಯೇ ವಶಕ್ಕೆ ಪಡೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next