Advertisement

ಕ್ರೆಸೆಂಟ್‌ ಆಂಗ್ಲ ಮಾಧ್ಯಮ ಶಾಲೆಯ ಮಹಾಸಭೆ

02:10 AM Jul 13, 2017 | Team Udayavani |

ಬಂದರು: ಕ್ರೆಸೆಂಟ್‌ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕ್ರೆಸೆಂಟ್‌ ಶಾಲಾ ಸಭಾಂಗಣದಲ್ಲಿ ಜರಗಿತು. ಅಧ್ಯಕ್ಷತೆ ವಹಿಸಿದ್ದ ಪಿ.ಟಿ.ಎ. ಅಧ್ಯಕ್ಷರಾದ ಬಿ.ಕೆ.ಇಮಿ¤ಯಾಝ್ ಮಾತನಾಡಿ, ವಿದ್ಯಾರ್ಥಿಗಳ ಪ್ರಗತಿಯಲ್ಲಿ ಪೋಷಕರ ಪಾತ್ರ ಮಹತ್ವದ್ದು, ಮತ್ತು ರಕ್ಷಕ -ಶಿಕ್ಷಕ ಸಭೆಯು ಪೋಷಕರು ಮತ್ತು ಶಿಕ್ಷಕರ ನಡುವೆ ಸಾಮರಸ್ಯ ಬೆಸೆಯುವ ಉತ್ತಮ ವೇದಿಕೆಯಾಗಿದೆ ಎಂದರು.

Advertisement

ಶಾಲೆಯ ಮಾಜಿ ಮುಖ್ಯ ಶಿಕ್ಷಕ ಸುಧಾಕರ್‌ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ  ಶೈಲಜಾ ಎಂ., ಶಾಲಾ ಸಂಚಾಲಕ ಎಂ. ಶರೀಫ್‌ ಪಿ.ಟಿ.ಎ. ಉಪಾಧ್ಯಕ್ಷ ಹಾಜಿ ಉಸ್ಮಾನ್‌, ಪಿ.ಟಿ.ಎ. ಗೌರವಾಧ್ಯಕ್ಷ ಡಿ. ಎಂ. ಅಸ್ಲಾಂ ಉಪಸ್ಥಿತರಿದ್ದರು. ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲಾ ಶಿಕ್ಷಕಿ ರೂಪ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ಗಣೇಶ್‌ ವಂದಿಸಿದರು.  ಶಿಕ್ಷಕ ಗೌರವ್‌ ಆರ್‌. ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next