Advertisement

ಫ್ರಂಟ್ ಲೈನ್ ವಾರಿಯರ್ಸ್ ಗೆ 10 ಸಾವಿರ ಪ್ಯಾಕೇಜ್ ಘೋಷಿಸಿ

10:05 AM May 30, 2020 | Suhan S |

ಬಾಗಲಕೋಟೆ: ಹತ್ತು ಸಾವಿರ ರೂ. ವಿಶೇಷ ಪ್ಯಾಕೇಜ್‌ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತೆಯರು ಶುಕ್ರವಾರ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದರು.

Advertisement

ಕೋವಿಡ್ ನಿಯಂತ್ರಣಕ್ಕಾಗಿ ಫ್ರಂಟ್ ಲೈನ್‌ ವಾರಿಯರ್ ಆಗಿರುವ ಆಶಾಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಹಲ್ಲೆಗೊಳಗಾದ ಆಶಾಗಳಿಗೆ ಪರಿಹಾರ ನೀಡಬೇಕು.ಮಾರ್ಚ್‌ ತಿಂಗಳಿಂದ ಕೋವಿಡ್‌-19 ಕಾರ್ಯ ನಿರ್ವಹಣೆ ಅವಧಿಗೆ ಮಾಸಿಕ 10 ಸಾವಿರದಂತೆ ವಿಶೇಷ ಪ್ಯಾಕೇಜ್‌ ನೀಡಬೇಕು, ಆಶಾಗಳಿಗೆ ಅಗತ್ಯ ಮಾಸ್ಕ್, ಸ್ಯಾನಿಟೈಸರ್‌, ಗ್ಲೌಸ್‌ ವಿತರಿಸಬೇಕು. ಮದ್ಯ ಸೇವಿಸಿ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರಿಗೆ ಉಗ್ರ ಶಿಕ್ಷೆ ನೀಡುವ ಜತೆಗೆ ಮದ್ಯ ಮಾರಾಟ ನಿಷೇಧಿಸಬೇಕು, ಕೋವಿಡ್‌-19ರಿಂದ ಮೃತಪಟ್ಟ ಆಶಾಗಳ ಕುಟುಂಬಕ್ಕೆ 50 ಲಕ್ಷ ರೂ. ವಿಮೆ ಸೌಲಭ್ಯ ಸೇವೆ ಸಲ್ಲಿಸುವ ವೇಳೆ ಆಶಾಗಳು ಮೃತರಾದರೆ ಅವರ ಕುಟುಂಬಕ್ಕೂ ಈ ವಿಮೆ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಅಂಜನಾ ಕುಂಬಾರ, ಪ್ರಮುಖರಾದ ಸೈನಾಜ್‌ ಜಂಗಿ, ರುಕ್ಸಾನಾ ನಾಗಠಾಣ, ಸುರೇಖಾ ಕಾಳೆ, ವಿದ್ಯಾ ಕಡಕೋಳ, ದಾನಮ್ಮ ವಿಭೂತಿ, ಶೀಲಾ ಮೆಳ್ಳಿಗೇರಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next