Advertisement

ಅನ್ನಪೂರ್ಣ ದೇವಿ ವಿಗ್ರಹ ಹಸ್ತಾಂತರ

12:12 AM Nov 12, 2021 | Team Udayavani |

ಹೊಸದಿಲ್ಲಿ: ಸುಮಾರು ನೂರು ವರ್ಷಗಳ ಹಿಂದೆ ವಾರಾಣಸಿಯ ಕಾಶಿ ದೇಗುಲದಿಂದ ಕಳವಾಗಿದ್ದ ಅನ್ನಪೂರ್ಣಾ ದೇವಿಯ ಮೂರ್ತಿಯನ್ನು ದೇಶಕ್ಕೆ ವಾಪಸು ತರಲಾಗಿದೆ. ಅದನ್ನು ಗುರುವಾರ ಹೊಸದಿಲ್ಲಿಯಲ್ಲಿ ಉತ್ತರ ಪ್ರದೇಶ ಸರಕಾರಕ್ಕೆ ಕೇಂದ್ರ ಸಂಸ್ಕೃತಿ ಖಾತೆ ಸಚಿವಾಲಯ ಜಿ. ಕಿಶನ್‌ ರೆಡ್ಡಿ ಹಸ್ತಾಂತರಿಸಿದ್ದಾರೆ.

Advertisement

ಅನ್ನಪೂರ್ಣಾ ದೇವಿಯ ಮೂರ್ತಿಯನ್ನು 1913ರಲ್ಲಿ ಕಳವು ಮಾಡಲಾಗಿತ್ತು. ಅನಂತರ ಅದನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಲಾ ಗಿತ್ತು. ಕೆನಡಾದ ಕಲಾ ಸಂಗ್ರಹಾಲಯದಲ್ಲಿದ್ದ ಮೂರ್ತಿಯನ್ನು ಅ.15ರಂದು ಭಾರತದ ಪುರಾತತ್ವ ಇಲಾಖೆಯು ವಾಪಸು ಪಡೆದುಕೊಂಡಿತ್ತು. ಅದನ್ನು ವಾರಾಣಸಿ ಯಲ್ಲಿರುವ ಕಾಶೀ ವಿಶ್ವನಾಥ ದೇಗುಲದಲ್ಲಿ ನ.15ರಂದು ಪುನರ್‌ ಪ್ರತಿಷ್ಠಾಪಿಸಲಾಗುತ್ತದೆ.

 

 

Advertisement

Udayavani is now on Telegram. Click here to join our channel and stay updated with the latest news.

Next