Advertisement

ಅಕ್ಷತಾ ಹೆಸರಿನಲ್ಲಿ ವಿದ್ಯಾರ್ಥಿ ವೇತನ ಕೊಡುತ್ತಿರುವ ಅಣ್ಣಾಮಲೈ

11:52 PM May 31, 2019 | Team Udayavani |

ಉಡುಪಿ: ನಾಲ್ಕು ವರ್ಷಗಳ ಹಿಂದೆ ಬೈಂದೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಮೇಲೆ ನಡೆದ ಪೈಶಾಚಿಕ ಕೃತ್ಯ ನಡೆದು ಅಸುನೀಗಿದ್ದು ನೆನಪಿರಬಹುದು.

Advertisement

ಅಕ್ಷತಾ ದೇವಾಡಿಗ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದಳು. ಆ ವರ್ಷ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಎಸ್‌ಪಿ ಅಣ್ಣಾಮಲೈ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅಂದು ಅಕ್ಷತಾಳ ತಂದೆ, ತಾಯಿ, ತಂಗಿ ಪಾಲ್ಗೊಂಡಿದ್ದರು. ಅವರನ್ನು ಕಂಡ ಅಣ್ಣಾಮಲೈ ಪ್ರಕರಣದ ಬಗ್ಗೆ ಸಂತಾಪ ವ್ಯಕ್ತಪಡಿಸಿ ಅಕ್ಷತಾಳ ಹೆಸರನಲ್ಲಿ ತಾನು ಪ್ರತಿವರ್ಷ 10,000 ರೂ. ನೀಡುತ್ತೇನೆ. ಅದನ್ನು ಪ್ರತೀ ವರ್ಷ ಬೈಂದೂರು ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿನಿಗೆ ನೀಡಬೇಕೆಂದು ಸೂಚಿಸಿದರು. ತಾನು ಮುಂದೆ ವರ್ಗಾವಣೆಯಾದರೂ ಸಂಪರ್ಕಿಸಬೇಕೆಂದು ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್‌ರಿಗೆ ನೀಡಿದರು.

ನಾಲ್ಕು ವರ್ಷಗಳಿಂದ ಅವರಿಗೆ ಫೋನ್‌ ಮಾಡಿ ನೆನಪಿಸುವ ಪ್ರಮೇಯವೇ ಬರಲಿಲ್ಲ. ಅವರೇ ಜುಲೈ ತಿಂಗಳಲ್ಲಿ ಪೋನ್‌ ಮಾಡಿ ಅಕ್ಷತಾಳ ಹೆಸರಿನ ವಿದ್ಯಾರ್ಥಿವೇತನದ ಹಣ ಕಳುಹಿಸಿಕೊಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next