Advertisement

ಪ್ರಮಾಣ ಪತ್ರ ಪಡೆಯಲು ಬರುವ ಅಂಗವಿಕಲರಿಗೆ ಅನ್ನದಾನ ಸೇವೆ

04:04 PM May 10, 2019 | Team Udayavani |

ಕೋಲಾರ: ಮಹಾನ್‌ ಪೋಷಣಾ ಎಜುಕೇಶನ್‌ ಟ್ರಸ್ಟ್‌ ವತಿಯಿಂದ ಅಂಗವಿಕಲರಿಗೆ ಸರ್ಕಾರಿ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಅಂಗವಿಕಲರ ಪ್ರಮಾಣಪತ್ರಕ್ಕೆ ಬರುವವರಿಗೆ ಅನ್ನದಾನ ಮಾಡಲಾಗುತ್ತಿದೆ.

Advertisement

ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಎಂ.ವೆಂಕಟರಾಮಪ್ಪ ಮಾತನಾಡಿ, ಆಹಾರ ಪ್ರತಿ ಜೀವಿಗೂ ಮುಖ್ಯವಾಗಿದೆ. ಅಂಗವಿಕಲರಿಗೆ ಆಹಾರ ನೀಡುವುದು ಮಹಾದಾನವೆಂದು ತಿಳಿಸಿದರು.

ಆಸ್ಪತ್ರೆಯ ವೈದ್ಯಾಧಿಕಾರಿ ಸಂತೋಷ್‌ಪ್ರಭು ಮಾತನಾಡಿ, ಇಂತಹ ಜನರಿಗೆ ಉಪಯೋಗವಾಗುವಂತ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವುದು ಸೂಕ್ತವೆಂದರು.

ಮಹಾನ್‌ ಪೋಷಣಾ ಎಜುಕೇಷನ್‌ ಕಾರ್ಯದರ್ಶಿ ಎಚ್.ಶ್ರೀನಿವಾಸಪ್ಪ ಮಾತನಾಡಿ, ಭಗವಂತನ ಕೃಪೆಯಿಂದ ನಮಗೆ ಸಿಕ್ಕ ಅವಕಾಶದಲ್ಲಿ ಮನುಷ್ಯರಿಗೆ ಸಹಾಯ ಮಾಡುವುದು ಮಾನವ ಧರ್ಮವೆಂದರು.

ಆಸ್ಪತ್ರೆಯ ವ್ಯವಸ್ಥಾಪಕ ಸಂದಪ್ಪ ಅಂಗವಿಕಲರಿಗೆ ಅನ್ನ ವಿತರಿಸಿದರು. ಶಿಳ್ಳಂಗೆರೆ ಮಹೇಶ್‌, ಎಸ್‌ಎನ್‌ಆರ್‌ ಗೋವಿಂದು, ಜನ್ನಘಟ್ಟ ನಾರಾಯಣಪ್ಪ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next