Advertisement

Ankola: ಗುಡ್ಡ ಕುಸಿತ ಸ್ಥಳ ಭೇಟಿ; ಲಾರಿ ಚಾಲಕರ ಒಕ್ಕೂಟದ ಸದಸ್ಯರನ್ನು ತಡೆದ ಪೊಲೀಸರು

02:52 PM Jul 22, 2024 | Team Udayavani |

ಅಂಕೋಲಾ: ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ತೆರಳುವ ಸಂದರ್ಭದಲ್ಲಿ ಕರ್ನಾಟಕ ಲಾರಿ ಚಾಲಕರ ಒಕ್ಕೂಟದ ಸದಸ್ಯರನ್ನು ಪೊಲೀಸರು 3 ಕೀ.ಮಿ. ಹಿಂದೆಯೇ ತಡೆ ಹಿಡಿದಿರುವ ಘಟನೆ ಜು.22ರ ಸೋಮವಾರ ನಡೆದಿದೆ.

Advertisement

ಲಾರಿ ಚಾಲಕ ಅರ್ಜುನ್ ಮಣ್ಣಿನಡಿ ಸಿಲುಕಿದ್ದು, ಆತನನ್ನು ಹೊರ ತೆಗೆಯುವ ಕಾರ್ಯಾಚರಣೆಗೆ ಹೋಗುತ್ತಿದ್ದೆವು. ನಮ್ಮನ್ನು ತಡೆಯುತ್ತಿರುವುದು ಸರಿಯಾದ ಕ್ರಮವಲ್ಲ ಎಂದ ಅವರು ನಂತರ ಆ ಸಂದರ್ಭದಲ್ಲಿ ಲಾರಿ ಚಾಲಕರ ಒಕ್ಕೂಟದ ಎಲ್ಲಾ ಚಾಲಕರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕಾರ್ಯಾಚರಣೆ ವಿಳಂಬವಾಗುತ್ತಿದೆ. ದಿನದ 24 ಗಂಟೆಯೂ ಕಾರ್ಯಾಚರಣೆ  ನಡೆಯಬೇಕು. ರಸ್ತೆ ಮೇಲೆ ನಿಂತ ಲಾರಿ ಚಾಲಕರಿಗೂ ಸಹಾಯ ನೀಡಬೇಕಿದೆ ಎಂದು ಒಕ್ಕೂಟದ ಸದಸ್ಯರು ಹೇಳಿದರು.

ಈ ಸಂದರ್ಭದಲ್ಲಿ ಪ್ರವೀಣ ನಾಯ್ಕ, ರಾಮಚಂದ್ರ ಗೌಡ, ಪ್ರಸಾದ ನಾಯ್ಕ, ಪ್ರಭಾಕರ ನಾಯ್ಕ, ಚಂದ್ರಶೇಖರ ಚಿಪ್ಕರ, ಅನಂತ ಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next