Advertisement

ಅಂಕೋಲಾ : ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆ ಅಧಿಕಾರಿ

09:26 PM Jan 06, 2023 | Team Udayavani |

ಅಂಕೋಲಾ :ಜಮೀನೊಂದರ ಬದಲಿ ನಕ್ಷೆಯನ್ನು ತಯಾರಿಸಿಕೊಡಲು ಸರ್ವೆ ಅಧಿಕಾರಿಯೋರ್ವರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆ ಶುಕ್ರವಾರ ರಾತ್ರಿ ಅಂಕೋಲಾದಲ್ಲಿ ನಡೆದಿದೆ.

Advertisement

ಅಂಕೋಲಾ ಸರ್ವೆ ಇಲಾಖೆಯ ಅಧಿಕಾರಿ ಪುಟ್ಟಸ್ವಾಮಿ ಇವರು ಖಾಸಗಿ ಹೋಟೆಲ್ ಒಂದರಲ್ಲಿ ನಕ್ಷೆಗಾಗಿ ಅರ್ಜಿ ಸಲ್ಲಿಸಿದ್ದ ರಮೇಶ ನಾಯಕ ಎಂಬವರಿಂದ 15 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಡಿವೈಎಸ್ಪಿ ರಾಜು ಅವರ ತಂಡ ಸರ್ವೆಯ ಎಡಿಎಲ್ಆರ್ ಪುಟ್ಟಸ್ವಾಮಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಜಮೀನಿನ ಬದಲಿ ನಕ್ಷೆ ತಯಾರಿಸಿಕೊಡಲು 50 ಸಾವಿರ ರೂ. ಬೇಡಿಕೆಯಿಟ್ಟ ಕುರಿತು ರಮೇಶ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next