Advertisement

ಅಂಕೋಲಾ : ಉಸ್ತುವಾರಿ ಸಚಿವರ ಸಭೆಗೆ ಬರುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿ, ಓರ್ವ ಸಾವು

12:12 PM Aug 07, 2021 | Team Udayavani |

ಅಂಕೋಲಾ : ಜಿಲ್ಲಾ ಕೇಂದ್ರ ಕಾರವಾರದಲ್ಲಿ ಉಸ್ತುವಾರಿ ಸಚಿವರ ಸಭೆಗೆ ಆಗಮಿಸುತ್ತಿದ್ದ ಅಧಿಕಾರಿಗಳ ಇನ್ನೋವಾ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿ ಓರ್ವ ಮೃತಪಟ್ಟ ಘಟನೆ ಬಾಳೆಗುಳಿ ಬಳಿ ನಡೆದಿದೆ.

Advertisement

ಸಿದ್ದಾಪುರ ಲೋಕೊಪಯೋಗಿ ಇಲಾಖೆಯ ಎಇಇ ಮುದುಕಣ್ಣನವರ ಮೃತ ಪಟ್ಟ ವ್ಯಕ್ತಿ, ಶಿರಸಿ ಲೋಕೊಪಯೋಗಿ ಇಲಾಖೆಯ ಎಇಇ ಕೃಷ್ಣಾ ರೆಡ್ಡಿ , ಪ್ರಥಮದರ್ಜೆ ಸಹಾಯಕ ಚೇತನ, ತಾಂತ್ರಿಕ ಸಹಾಯಕ ರವಿ ಪಾಟೀಲ ಅವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಚಾಲಕ ರಾಘವೇಂದ್ರ ನಾಗೇಶ ಭಂಡಾರಿ ಅಂಕೋಲಾ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಾಳೆಗುಳಿ ಬಳಿ ರಸ್ತೆಯ ಮೇಲೆಯೆ ಭಾರಿ ಪ್ರಮಾಣದಲಿ ಮಳೆ ನೀರು ಹರಿಯುತ್ತಿರುವುದರಿಂದ ಈ ಅವಘಡಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾರವಾರ ಸಭೆಗೆ ತೆರಳುತ್ತಿದ್ದ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಂಕೋಲಾ ತಾಲೂಕಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಮೃತಪಟ್ಟ ಎಇಇ ಮುದುಕಣ್ಣನವರರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಜೊತೆಯಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ, ಸ್ಥಳಿಯರಾದ ಬಾಸ್ಕರ ನಾರ್ವೇಕರ ಇದ್ದರು.

ಇದನ್ನೂ ಓದಿ :ಕೋವಿಡ್ ಲಸಿಕೆ ಹಾಕಿಸಿದ ಕೆಲವೇ ತಾಸುಗಳಲ್ಲಿ ಗರ್ಭಿಣಿ ರಕ್ತಸ್ರಾವದಿಂದ ಸಾವು

Advertisement

ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಕೂಡ ಭೇಟಿ ನೀಡಿದ್ದರು. ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ, ಪಿಎಸ್‌ಐ ಪ್ರವೀಣಕುಮಾರ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next