Advertisement

Ankola: ಪ್ರವಾಸಕ್ಕೆಂದು ತೆರಳಿದ್ದ ಯುವಕ ನೀರಿಗೆ ಬಿದ್ದು ನಾಪತ್ತೆ

06:56 PM Oct 15, 2023 | Team Udayavani |

ಅಂಕೋಲ : ಪ್ರವಾಸಕ್ಕೆಂದು ತೆರಳಿದ್ದ ವೇಳೆ ನೀರಿಗೆ ಬಿದ್ದು ನಾಪತ್ತೆಯಾದ ಘಟನೆ ತಾಲೂಕಿನ ಹೊಸಕಂಬಿ ಹಳ್ಳದಲ್ಲಿ ಭಾನುವಾರ ಸಂಜೆ ನಡೆದಿದೆ.

Advertisement

ಬೊಬ್ರವಾಡದ ಸುಹಾಸ ಕೃಷ್ಣ ( ಪಾಂಡುರಂಗ) ನಾಯ್ಕ (28) ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾದ ಯುವಕ.

ನಡೆದದ್ದೇನು..?

ಅಂಕೋಲಾದ 15 ಜನರ ಗೆಳೆಯರ ತಂಡ ಹೊಸಕಂಬಿಯ ಹಳ್ಳದ ವಿಹಂಗಮ ಪ್ರದೇಶದಲ್ಲಿ ಪಾರ್ಟಿ ಮಾಡಲೆಂದು ತೆರಳಿದ್ದರು. ಈ ವೇಳೆ ಚಿಪ್ಪೆಕಲ್ಲನ್ನು ಆರಿಸಲು ಸುಹಾಸ ನಾಯ್ಕ ಗೆಳಯನೊಂದಿಗೆ ಇನ್ನೊಂದು ಬದಿಗೆ ನೀರಿಗೆ ಇಳಿದಿದ್ದ. ಈ ವೇಳೆ ಇಬ್ಬರು ನೀರಿನ ಹರಿವಿಗೆ ಸಿಲುಕಿದ್ದಾರೆ. ಹರಸಾಹಸ ಪಟ್ಟು ದಡ ಸೇರಿದ್ದಾನೆ. ಆದರೆ ಸುಹಾಸಗೆ ಸರಿಯಾಗಿ ಈಜು ಬರದೇ ಇರುವದರಿಂದ ನೋಡು ನೋಡುತ್ತಲೆ ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದಾನೆ.

ಸುಹಾಸನ ಪತ್ತೆಗೆ ಆತನ ಗೆಳೆಯರು ಮತ್ತು ಅಗ್ಬಿಶಾಮಕ ದಳದ ಸಿಬ್ಬಂದಿಗಳು ಶ್ರಮಿಸಿದ್ದಾರೆ. ಸಿಪಿಐ ಸಂತೋಷ ಶೆಟ್ಟಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪಾರ್ಟಿಗೆ ತೆರಳಿದ್ದ ಗೆಳಯರನ್ನು ವಿಚಾರಣೆ ನಡೆಸಿದ್ದಾರೆ.

Advertisement

ಇದನ್ನೂ ಓದಿ: Dotihal: ಹಳ್ಳಕ್ಕೆ ಬಿದ್ದ ಮಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್

Advertisement

Udayavani is now on Telegram. Click here to join our channel and stay updated with the latest news.

Next