Advertisement

ನಕ್ಸಲ್‌ಪೀಡಿತ ಪ್ರದೇಶದಲ್ಲಿ ಎಎನ್‌ಎಫ್‌ ಕಟ್ಟೆಚ್ಚರ

11:28 PM Mar 23, 2024 | Team Udayavani |

ಶೃಂಗೇರಿ: ದಕ್ಷಿಣ ಕನ್ನಡ-ಕೊಡಗು ಗಡಿಭಾಗದಲ್ಲಿ ಮಾ.16ರಂದು ಕಾಣಿಸಿಕೊಂಡಿದ್ದ ನಾಲ್ವರು ನಕ್ಸಲರ ತಂಡ ಪಶ್ಚಿಮ ಘಟ್ಟ ಪ್ರದೇಶದ ಚಿಕ್ಕಮಗಳೂರು ಭಾಗಕ್ಕೆ ಆಗಮಿಸಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಎಎನ್‌ಎಫ್‌ ತಂಡ ಕಟ್ಟೆಚ್ಚರದಿಂದಿದೆ. ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಎಎನ್‌ಎಫ್‌ ತಂಡ ಗಸ್ತು ಕಾರ್ಯಕ್ಕೆ ಮುಂದಾಗಿದೆ.

Advertisement

ಕಳೆದ ವಾರ ಮಡಿಕೇರಿ ತಾಲೂಕಿನ ಕೂಜಿಮಲೆ ಬಳಿ ಅಂಗಡಿಯೊಂದರಲ್ಲಿ ದಿನಸಿ ಖರೀದಿ ಸಿ ತೆರಳಿದ ಶಂಕಿತ ನಕ್ಸಲರ ಪೈಕಿ ನಾಲ್ವರು ನಕ್ಸಲ್‌ ವಿಕ್ರಮ್‌ ಗೌಡನ ತಂಡದವರು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಶೃಂಗೇರಿ ತಾಲೂಕಿನ ಬುಕ್ಕಡಿಬೈಲ್‌ ಸಮೀಪದ ಮುಂಡಗಾರಿನ ಲತಾ ಇದೇ ತಂಡದಲ್ಲಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಇದೇ ಕಾರಣಕ್ಕೆ ತಂಡ ಚಿಕ್ಕಮಗಳೂರು ಜಿಲ್ಲೆಯ ಕಾಡನ್ನು ಪ್ರವೇಶಿಸಬಹುದು ಎಂಬ ಸಂಶಯ ಬಲವಾಗಿದೆ. 2022ರಲ್ಲಿ ನಕ್ಸಲರ ತಂಡ ಪುನಃ ಕರ್ನಾಟಕಕ್ಕೆ ಪ್ರವೇಶಿಸಿದೆ ಎಂಬ ಮಾಹಿತಿ ಕಲೆಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next