Advertisement

ಆಂಧ್ರ ಬಂದ್‌: ಟಿಡಿಪಿ ಕಾರ್ಯಕರ್ತರು ವಶಕ್ಕೆ

09:01 PM Oct 20, 2021 | Team Udayavani |

ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ ಆಡಳಿತದಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸಿ ತೆಲುಗು ದೇಸಂ ಪಕ್ಷ(ಟಿಡಿಪಿ)ದವರು ಬುಧವಾರದಂದು ಆಂಧ್ರಪ್ರದೇಶ ಬಂದ್‌ ನಡೆಸಿದ್ದಾರೆ. ಟಿಡಿಪಿ ಕಚೇರಿಗಳನ್ನು ಧ್ವಂಸ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ.

Advertisement

ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಬಾರದೆಂಬ ದೃಷ್ಠಿಯಿಂದ ಟಿಡಿಪಿಯ ಪ್ರಮುಖ ನಾಯಕರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿತ್ತು. ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಇದನ್ನೂ ಓದಿ:ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

ಟಿಡಿಪಿ ಪಕ್ಷದ ವಕ್ತಾರರು ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದರೆಂಬ ಕಾರಣಕ್ಕೆ, ವೈಎಸ್‌ಆರ್‌ಸಿಪಿಯು ಟಿಡಿಪಿಯ ವಿಶಾಖಪಟ್ಟಣಂ ಕಚೇರಿ ಸೇರಿ ಅನೇಕ ಕಚೇರಿಗಳನ್ನು ಇತ್ತೀಚೆಗೆ ಧ್ವಂಸ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next