Advertisement

ಆಂಧ್ರ, ಕರ್ನಾಟಕ ಗಡಿ ಜಿಲಾ ಪೊಲೀಸ್‌ ಅಧಿಕಾರಿಗಳ ಸಭೆ

05:40 PM Jul 15, 2022 | Team Udayavani |

ಶ್ರೀನಿವಾಸಪುರ: ತಾಲೂಕಿನ ಹೊಗಳಗೆರೆ ತೋಟಗಾರಿಕೆ ಮಾವು ಸಂಶೋಧನಾ ಕೇಂದ್ರದಲ್ಲಿ ಆಂಧ್ರ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಎಸ್ಪಿ ಡಿ.ದೇವರಾಜ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

Advertisement

ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆ, ಚಿತ್ತೂರು, ಪಲಮನೇರು ಹಾಗೂ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಕೆಜಿಎಫ್ ಪೊಲೀಸ್‌ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ನಂತರ ಎಸ್ಪಿ ದೇವರಾಜ್‌ ಸುದ್ದಿಗಾರರೊಂದಿಗೆ ಮಾತನಾಡಿದರು. ಗಡಿ ಭಾಗದಲ್ಲಿ ಕಳ್ಳತನ, ಅಕ್ರಮ ಚಟುವಟಿಕೆಗಳು, ಅಕ್ರಮವಾಗಿ ವಸ್ತುಗಳ ಸಾಗಣೆ, ಕಳ್ಳತನ, ಅಪರಾಧ ಪ್ರಕರಣಗಳ ತಡೆಯುವುದು, ಇತರೆ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದರು.

ಗಾಂಜಾ ಸಾಗಾಣಿಕೆ ತಡೆ: ಹಲವು ಪ್ರಕರಣಗಳಲ್ಲಿ ತನಿಖೆ ನಡೆಸುವಾಗ ಪರಸ್ಪರ ಸಹಕಾರ, ಮಾಹಿತಿ ವಿನಿಮ ಯದ ಬಗ್ಗೆ ಮಾತುಕತೆ ನಡೆಸಲಾಗಿದೆ. ಆಂಧ್ರ ಮೂಲಕ ರಾಜ್ಯಕ್ಕೆ ಗಾಂಜಾ ಸಾಗಾಣಿಕೆ ತಡೆ ಯುವುದು, ಆರೋಪಿಗಳನ್ನು ಸೆರೆ ಹಿಡಿದು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.

ಅಬಕಾರಿ ಪ್ರಕರಣಗಳ ಕುರಿತು ಚರ್ಚೆ: ಗೋ ಸಾಗಾಣಿಕೆ, ಅಂತಾರಾಜ್ಯ ಕಳ್ಳರ ಗ್ಯಾಂಗ್‌, ಅಬಕಾರಿ ವಿಷಯಕ್ಕೆ ಸಂಬಂಧಿಸಿ ಪ್ರಕರಣಗಳನ್ನು ಹೇಗೆ ತಡೆಯಬೇಕೆಂಬುವ ವಿಚಾರ ಕುರಿತೂ ಚರ್ಚೆ ನಡೆಸಲಾಗಿದೆ. ಹಾಗೆಯೇ, ಗಡಿ ಭಾಗಗಳಲ್ಲಿ ವಿವಿಧ ಕಾರಣಗಳಿಂದ ಮೃತಪಟ್ಟ ಅನಾಥ ಶವಗಳ ಬಗ್ಗೆ ಗಮನ ಹರಿಸುವುದು, ನಾಪತ್ತೆ ಪ್ರಕರಣಗಳಲ್ಲಿ ಸದರಿ ಮೃತಪಟ್ಟವರು ತಾಳೆಯಾಗುತ್ತಾರೆ ಎಂಬುದನ್ನು ಸಹ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ
ಪರಿಗಣಿಸಬೇಕೆಂದು ತಿಳಿಸಲಾಗಿದೆ ಎಂದು ವಿವರಿಸಿದರು.

ಸಮನ್ವಯ ಅಗತ್ಯ: ರಾಜ್ಯ ಮತ್ತು ಅಂತಾರಾಜ್ಯ ಅಪರಾಧ ಪ್ರಕರಣಗಳು ಆಂಧ್ರ ಅಥವಾ ಕರ್ನಾಟಕದಲ್ಲಿ ನಡೆದರೂ ಪೊಲೀಸರು ಸಹಕಾರ, ಸಮನ್ವಯ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಆಗ ಅಪರಾಧಗಳನ್ನು ಸಾಧ್ಯವಾದಷ್ಟು ತಡೆಯಬಹುದು. ಈ ಬಗ್ಗೆಯೂ ಮಾತುಕತೆ ನಡೆಸಲಾಯಿತು ಎಂದು ತಿಳಿಸಿದರು.

Advertisement

ಅಪರಾಧಿಗಳ ಮಟ್ಟ ಹಾಕಲು ಸಭೆ: ಒಟ್ಟಾರೆಯಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಗಡಿ ಭಾಗಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಸಂಬಂಧ ಉಭಯ ರಾಜ್ಯಗಳಲ್ಲಿ ಸುಳಿದಾಡುವ ಅಪರಾಧಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು. ಆಂಧ್ರ ಪ್ರದೇಶದ ಪಲಮನೇರು ಡಿವೈಎಸ್ಪಿ ಗಂಗಯ್ಯ, ಮದನಪಲ್ಲಿ ಡಿವೈಎಸ್ಪಿ ರವಿ ಮನೋಹರಾಚಾರಿ, ಜಿಲ್ಲೆಯ ಬೇತಮಂಗಲ ಸಿಪಿಐ ವೆಂಕಟೇಶ್‌, ಮುಳಬಾಗಿಲು ಡಿವೈಎಸ್ಪಿ
ಜಯಶಂಕರ್‌, ಶ್ರೀನಿವಾಸಪುರ ಸಿಪಿ.ಐ. ಬಿ.ಜಿ.ನಾರಾಯಣಸ್ವಾಮಿ, ಗೌನಿಪಲ್ಲಿ ಸಿಪಿಐ ಜಯರಾಜ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next