Advertisement

ಅನಂತಕುಮಾರ ಹೆಗಡೆ ರೋಡ್‌ ಶೋ

04:38 PM Apr 21, 2019 | pallavi |

ಸಿದ್ದಾಪುರ: ಉತ್ತರಕನ್ನಡ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರವಾಗಿ ಶನಿವಾರ ಪಟ್ಟಣದಲ್ಲಿ ರೋಡ್‌ ಶೋ ನಡೆಯಿತು. ಭಗತಸಿಂಗ್‌ ವೃತ್ತದಿಂದ ಆರಂಭಗೊಂಡ ರೋಡ್‌ ಶೋ ಪ್ರಮುಖ ಬೀದಿಗಳ ಮೂಲಕ ಹಾದುಬಂದು ಗಾರ್ಡನ್‌ ವೃತ್ತದಲ್ಲಿ ಸಮಾವೇಶಗೊಂಡಿತು.

Advertisement

ನಂತರ ಮಾತನಾಡಿದ ಅನಂತ ಕುಮಾರ ಹೆಗಡೆ, ಜನಸಾ ಮಾನ್ಯರೂ ನರೇಂದ್ರ ಮೋದಿಯವರನ್ನ ಪುನಃ ಪ್ರಧಾನಿಯನ್ನಾಗಿ ಮಾಡಲು ತೀರ್ಮಾನಿಸಿದ್ದಾರೆ. ಇದು ಐತಿಹಾಸಿಕ ಚುನಾವಣೆ. ಮೋದಿ ಅಧಿಕಾರಕ್ಕೆ ಬಂದ ನಂತರದಲ್ಲಿ ಪ್ರತಿಯೊಬ್ಬರ ಆರ್ಥಿಕತೆಯೂ ಚೇತರಿಸಿಕೊಂಡಿದೆ. ಅಭಿವೃದ್ಧಿ ಎನ್ನುವದು ಜನರ ಎದುರು ತಂದಿಡುವ ಕೇಕ್‌ ಅಲ್ಲ. ಅದು ನಿರಂತರವಾಗಿ ನಡೆಯುವಂಥದ್ದು. ಅಭಿವೃದ್ಧಿ ದಾರಿಯಲ್ಲಿ ಹೊಸ ದಾಖಲೆ ಮಾಡಲು ಪುನಃ ಮೋದಿ ಸರಕಾರ ಬರಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ಮಾತನಾಡಿ ದೇಶದ ಒಳಿತಿಗೆ ನರೇಂದ್ರ ಮೋದಿ ಪುನಃ ಅಧಿಕಾರಕ್ಕೆ ಬರಬೇಕು. ಬಿಜೆಪಿ ಜನಸಾಮಾನ್ಯರ ಪರವಾಗಿ ಶ್ರಮಿಸುವ ಪಕ್ಷ ಎಂದರು. ತಾಲೂಕಾಧ್ಯಕ್ಷ ಎಂ.ವಿ. ಭಟ್ಟ ಮುಂತಾದವರಿದ್ದರು. ನಾರಾಯಣ ನಾಯ್ಕ ಕೋಲಸಿರ್ಸಿ, ಆನಂದ ನಾಯ್ಕ ಅವರಗುಪ್ಪ, ಕನ್ನಪ್ಪ ಕಸ್ತೂರ, ಚಂದ್ರಶೇಖರ ಹೆಗಡೆ ಓಜಗಾರ ಬಿಜೆಪಿಯನ್ನು ಸೇರ್ಪಡೆಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next