Advertisement

Sirsi: ಕೆ‌.ಪಿ.ಹೆಗಡೆ‌ ಅವರಿಗೆ ಅನಂತಶ್ರೀ ಪ್ರಶಸ್ತಿ ಪ್ರದಾನ

10:52 AM Oct 02, 2023 | Team Udayavani |

ಸಿದ್ದಾಪುರ/ಶಿರಸಿ: ಇಲ್ಲಿನ ಅನಂತ ಯಕ್ಷ ಕಲಾ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ಅನಂತಶ್ರೀ ಪ್ರಶಸ್ತಿಯನ್ನು ತಾಲೂಕಿನ ಹೇರೂರಿನ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ಹಿರಿಯ ಭಾಗವತ, ಯಕ್ಷ ಗುರು ಕೆ.ಪಿ.ಹೆಗಡೆ ಗೋಳಗೋಡ ದಂಪತಿಗಳಿಗೆ ಪ್ರದಾನ ಮಾಡಲಾಯಿತು.

Advertisement

ಆ.1ರ ರವಿವಾರ ಶಾಸಕ ಭೀಮಣ್ಣ ನಾಯ್ಕ ಪ್ರಶಸ್ತಿ ಪ್ರದಾನ ಮಾಡಿದರು. ಅಭಿನಂದನಾ ನುಡಿಯನ್ನು ವಿದ್ಯಾವಾಚಸ್ಪತಿ ಉಮಾಕಾಂತ‌ ಭಟ್ಟ ಕೆರೇಕೈ  ಆಡಿದರು.

ಸಹಕಾರಿ ಆರ್.ಎಂ.ಹೆಗಡೆ ಬಾಳೇಸರ, ಪತ್ರಕರ್ತ ಗಂಗಾಧರ‌ ಕೊಳಗಿ, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ದೇವಸ್ಥಾನ ಅಧ್ಯಕ್ಷ‌ ನರಸಿಂಹಮೂರ್ತಿ ಹೆಗಡೆ, ಭಾಗವತ ಕೇಶವ ಹೆಗಡೆ‌ ಕೊಳಗಿ ಇತರರು ಇದ್ದರು. ಪ್ರತಿಷ್ಠಾನದ ಅಧ್ಯಕ್ಷ‌ ವಿ.ಎಂ.ಭಟ್ಟ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next