Advertisement

Ananthakumar Hegde ಯನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು: ಸಚಿವ ತಂಗಡಗಿ

09:31 PM Mar 11, 2024 | Team Udayavani |

ಕೊಪ್ಪಳ: ಸಂವಿಧಾನ ಬದಲಾವಣೆ ವಿಚಾರವಾಗಿ ಮಾತನಾಡಿದ ಸಂಸದ ಅನಂತ ಕುಮಾರ್ ಹೆಗಡೆ ಒಬ್ಬ ಹುಚ್ಚ, ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಕಿಡಿ ಕಾರಿದ್ದಾರೆ.

Advertisement

ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಾತನಾಡಿ, ಅನಂತ್ ಕುಮಾರ್ ಹೆಗಡೆ ಯನ್ನು ಬಿಜೆಪಿಯವರು ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಆತನ ನಾಲಗೆಗೆ ಮತ್ತು ಮೆದುಳಿಗೆ ಕನೆಕ್ಷನ್ ತಪ್ಪಿದೆ. ಹೀಗಾಗಿ ಆತ ಏನೇನೋ ಮಾತನಾಡುತ್ತಾನೆ. ಸಂವಿಧಾನ ಬದಲಾವಣೆ ಮಾಡಲು ಆತನ್ಯಾರು, ಅವನಿಗೆ ಯಾವ ಹಕ್ಕಿದೆ ?ಎಂದು ಸಂಸದ ಹೆಗಡೆ ವಿರುದ್ಧ ತಂಗಡಗಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಈಗ ಬಿಜೆಪಿಯವರಿಗೆ ಚುನಾವಣೆ ಬಂದಾಗ ಪಾಕಿಸ್ಥಾನ ನೆನಪಾಗುತ್ತದೆ. ಅವರಿಗೆ ಬಡವರು ನೆನಪಾಗೋದಿಲ್ಲ. ಬರಗಾಲದ ಸಮಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಮಾನವ ದಿನಗಳನ್ನು ಹೆಚ್ಚಿಸಬೇಕಿತ್ತು. ನೂರರಿಂದ 150 ದಿನಕ್ಕೆ ಹೆಚ್ಚಿಸಬೇಕಿತ್ತು. ಆದರೆ ಇಲ್ಲಿಯ ವರಗೂ ಕೇಂದ್ರ ಸರ್ಕಾರ ಕೆಲಸದ ದಿನಗಳನ್ನು ಹೆಚ್ಚಿಸಿಲ್ಲ.ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next